Advertisement

Sandalwood: ಮತ್ತೆ ನಾ ನಿನ್ನ ಬಿಡಲಾರೆ “ನಾ ನಿನ್ನ ಬಿಡಲಾರೆ’

02:37 PM Jun 25, 2024 | Team Udayavani |

ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಹಾರರ್‌ ಸಿನಿಮಾ. ಅನಂತ್‌ ನಾಗ್‌, ಲಕ್ಷ್ಮೀ ಅಭಿನಯದ ಈ ಚಿತ್ರವನ್ನು ಮರೆಯುವಂತಿಲ್ಲ. ಈಗ ಯಾಕೆ ಈ ಮಾತು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ “ನಾ ನಿನ್ನ ಬಿಡಲಾರೆ’.

Advertisement

ಹೌದು, “ನಾ ನಿನ್ನ ಬಿಡಲಾರೆ’ ಎಂಬ ಟೈಟಲ್‌ನಡಿ ಸಿನಿಮಾವೊಂದು ಸೆಟ್ಟೇರಿದೆ. ಹೇಮಂತ್‌ ಹೆಗಡೆ ಈ ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರೆ.

ಮುಹೂರ್ತ ಬಳಿಕ ಚಿತ್ರದ ಬಗ್ಗೆ ಮಾತನಾಡಿದ ಹೇಮಂತ್‌, “ಇದೊಂದು ಸೇಡಿನ ಕಥೆ. ಜೊತೆಗೆ ದೆವ್ವದ ಕಥೆಯೂ ಹೌದು. ಇದೇ ಕಾರಣದಿಂದ ಚಿತ್ರಕ್ಕೆ “ನಾ ನಿನ್ನ ಬಿಡಲಾರೆ’ ಎಂಬ ಟೈಟಲ್‌ ಇಡಲಾಗಿದೆ. ಈ ಚಿತ್ರಕ್ಕೆ ನಾನೇ ಕಥೆ ಬರೆದು ನಿರ್ದೇಶನ ಮಾಡಿ, ನಾನೇ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನಾನು ಸಾಫ್ಟ್ವೇರ್‌ ಇಂಜಿನಿಯರ್‌ ಪಾತ್ರ ಮಾಡುತ್ತಿದ್ದೇನೆ’ ಎಂದರು. ಕನ್ನಡದಲ್ಲಿ ಒಂದೊಳ್ಳೆಯ ಹಾರರ್‌ ಸಿನಿಮಾ ಬಂದು ಬಹಳ ಸಮಯ ಆಗಿದ್ದು, ಅದಕ್ಕಾಗಿ “ನಾ ನಿನ್ನ ಬಿಡಲಾರೆ’ ಚಿತ್ರ ಮಾಡಲು ಮುಂದಾದೆ. ಆರಂಭದಲ್ಲಿ ಈ ಟೈಟಲ್‌ ಇರಲಿಲ್ಲ. ಕಥೆ ಮಾಡುತ್ತಾ ಇದೇ ಟೈಟಲ್‌ ಸೂಕ್ತ ಎನಿಸಿತು ಎಂದು ವಿವರ ನೀಡಿದರು.

ಚಿತ್ರವನ್ನು ಶಶಿಕಿರಣ್‌ ರಂಗನಾಥ್‌, ಕಿರಣ್‌ ನಾಗರಾಜ್‌ ಮತ್ತು ಬಾಲಕೃಷ್ಣ ಪೆರುಂಬಲ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ಭಾವನಾ ದೆವ್ವವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಧ್ಯವಯಸ್ಕ ಬ್ರಾಹ್ಮಣ ಮಹಿಳೆಯ ಪಾತ್ರ ಮಾಡುತ್ತಿದ್ದಾರಂತೆ. “ಮಲೆನಾಡಿನ ಬ್ರಾಹ್ಮಣ ಮಹಿಳೆ ಪಾತ್ರ. ಮನಸ್ಸಿಗೆ ಆಪ್ತವಾಗುವ ಪಾತ್ರವಿದಿ. ಏಕೆಂದರೆ, ನಾನು ಶಿವಮೊಗ್ಗದ ಬ್ರಾಹ್ಮಣರ ವಠಾರದಲ್ಲಿ ಬೆಳೆದವಳು’ ಎನ್ನುವುದು ಭಾವನಾ ಮಾತು. “ನಾ ನಿನ್ನ ಬಿಡಲಾರೆ’ ಚಿತ್ರದಲ್ಲಿ ಹೇಮಂತ್‌ ಹೆಗಡೆಗೆ ನಾಯಕಿಯಾಗಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next