Advertisement

ಇಡ್ಯಾಡಿಯಲ್ಲಿ ಭಾರೀ ಗಾಳಿ: ವ್ಯಾಪಕ ಕೃಷಿ ಹಾನಿ

02:22 PM Sep 09, 2019 | Team Udayavani |

ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾಮದ ಇಡ್ಯಾಡಿ ಭಾಗದಲ್ಲಿ ರವಿವಾರ ಮಧ್ಯಾಹ್ನದ ವೇಳೆಗೆ ಬೀಸಿದ ಭಾರೀ ಗಾಳಿಯಿಂದಾಗಿ ಇಲ್ಲಿನ ಅಶ್ವಿ‌ನಿ ಫಾರ್ಮ್ನಲ್ಲಿ ಅಪಾರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಗಿಡಗಳು ನಾಶವಾಗಿವೆ.

Advertisement

ರಾಜಾರಾಮ ಪ್ರಭು ಅವರ ಒಡೆತನದ ಕುಮಾಧಾರಾ ನದಿ ತಟದಲ್ಲಿರುವ ಅಶ್ವಿ‌ನಿ ಫಾರ್ಮ್ ಭಾಗದಲ್ಲಿ ಹಠಾತ್ತನೆ ಗಾಳಿ ಬೀಸಿದ್ದು, ಫಲಭರಿತ ನೂರಾರು ಅಡಿಕೆ ಗಿಡಗಳು ಧರೆಗೆ ಉರುಳಿವೆ. ಗಾಳಿ ಆರ್ಭಟಕ್ಕೆ ಏಳು ತೆಂಗಿನ ಮರಗಳು ಮುರಿದು ಬಿದ್ದಿವೆ. ಇತರ ಗಿಡ-ಮರಗಳೂ ಮುರಿದಿದ್ದು ಗಾಳಿಯ ತೀವ್ರತೆಯನ್ನು ಸಾರಿ ಹೇಳುತ್ತಿತ್ತು. ಅಕ್ಕಪಕ್ಕದ ತೋಟಗಳಲ್ಲಿ ಗಾಳಿಯ ಹಾವಳಿ ಇಲ್ಲದಿರುವುದು ಸ್ಥಳೀಯರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಎಂಟು ವರ್ಷಗಳ ಹಿಂದೆಯೂ ಈ ರೀತಿ ಗಾಳಿ ಬೀಸಿ, 400 ಅಡಿಕೆ ಗಿಡಗಳು ನಾಶವಾಗಿದ್ದವು ಎಂದು ರಾಜಾರಾಮ ಪ್ರಭು ನೆನಪಿಸಿಕೊಂಡಿದ್ದಾರೆ.ರವಿವಾರ ಬೀಸಿದ ಗಾಳಿಯಿಂದಾಗಿ ಲಕ್ಷಾಂತಾರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next