Advertisement

ಭಟ್ಕಳದಲ್ಲಿ ಭಾರಿ ಮಳೆ: ಮೀನುಗಾರಿಕಾ ಬೋಟುಗಳಿಗೆ ಹಾನಿ

08:34 PM Aug 02, 2022 | Team Udayavani |

ಭಟ್ಕಳ: ಭಟ್ಕಳದಲ್ಲಿ ಸುರಿದ ಭಾರೀ ಮಳೆಗೆ ಮೀನುಗಾರಿಕಾ ಬೋಟುಗಳಿಗೆ ಹಾಗೂ ದೋಣಿಗಳಿಗೆ ಹಾನಿಯಾಗಿದ್ದು ಸುಮಾರು 1 ಕೋಟಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

Advertisement

ಅಳ್ವೇಕೋಡಿಯಲ್ಲಿ ಯಕ್ಷೇಶ್ವರಿ ಮಾಟಬಲೆಗೆ ಸಂಬಂಧಪಟ್ಟ ಮೂರು ದೋಣಿಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ ಒಂದು ದೋಣಿಗೆ ಸಂಪೂರ್ಣ ಹಾನಿಯಾಗಿದೆ ಎಂದು ವರದಿಯಾಗಿದೆ.

ಇನ್ನೂ ಸುಮಾರು 10-15 ದೋಣಿಗಳಿಗೆ ಹಾನಿಯಾಗಿದ್ದು, ಹಾನಿಯನ್ನು ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ. ತೆಂಗಿನಗುಂಡಿ ಮೀನುಗಾರಿಕಾ ಬಂದರಿನಲ್ಲಿ ಸಹ ಅನೇಕ ದೋಣಿಗಳಿಗೆ, ಬೋಟುಗಳಿಗೆ ಹಾನಿಯಾಗಿದ್ದು ಎರಡು ದೋಣಿಗಳು ನೀರಿನಲ್ಲಿ ಕೊಚ್ಚಿ ಸಮುದ್ರ ಸೇರಿದ್ದು ಸಂಪೂರ್ಣ ಹಾನಿಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಮಳೆಗೆ ಒಂದೇ ದಿನ 6 ಸಾವು: ನಾಳೆ 10 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಸುಮಾರು 7 ಯಮಹಾ ಇಂಜಿನ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಕುರಿತು ವರದಿಯಾಗಿದ್ದು, ಬೈಂದೂರಿನ ಮಾಟಬಲೆ ದೋಣಿಯೊಂದರ ಸುಮಾರು 15 ಲಕ್ಷದ ಮೀನುಗಾರಿಕಾ ಬಲೆಯು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಏಕದಂತ ಎನ್ನುವ ಬೋಟ್‌ ಅನ್ನು ಮೀನುಗಾರರು ರಕ್ಷಣೆ ಮಾಡಿದ್ದರಿಂದ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next