Advertisement

Heavy rain; ಉಜ್ಜಯಿನಿ ಮಹಾಕಾಲ ಮಂದಿರ ಗೋಡೆ ಕುಸಿದು 2 ಸಾವು

11:29 PM Sep 27, 2024 | |

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗುರು­ವಾರ ಧಾರಾಕಾರ ಮಳೆಯಾಗಿದೆ. ಇಲ್ಲಿನ ಮಹಾಕಾಲ್‌ ಮಂದಿರದ ಎದುರು ಇರುವ ಬಡಾ ಗಣೇಶ್‌ ಮಂದಿರದ ಸಮೀಪದ ಗೋಡೆ ಕುಸಿದು, ಇಬ್ಬರು ಅಸುನೀಗಿದ್ದಾರೆ. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾ­ಗಿದೆ. ಈ ಪೈಕಿ ಹೆಚ್ಚಿನವರು, ಪೂಜಾ ಸಾಮಗ್ರಿಗಳ ವ್ಯಾಪಾರಿಗಳಾಗಿದ್ದಾರೆ. ಗೋಡೆಯ ಅವಶೇಷಗಳ ನಡುವೆ ಹಲವರು ಸಿಲುಕಿರುವ ಶಂಕೆ ಇದೆ. ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ದೇವಾಲಯದ ನಾಲ್ಕನೇ ಗೇಟ್‌ ಎದುರು ಇರುವ ಹಳೆಯ ಶಾಲೆಯೊಂದರ ಗೋಡೆ ಕುಸಿದಿದೆ.

Advertisement

ಹಿಂದಿನ ಘಟನೆಗಳು: ಮಾ.24ರಂದು ಹೋಳಿ ಹಬ್ಬದ ವೇಳೆ ದೇಗುಲದಲ್ಲಿ ಭಸ್ಮ ಆರತಿ ವೇಳೆ ಬೆಂಕಿ ಆಕಸ್ಮಿಕ ಉಂಟಾಗಿ 14 ಮಂದಿಗೆ ಗಾಯಗಳಾಗಿದ್ದವು. 2023ರ ಮೇ 29ರಂದು ಯೋಜನೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ 6 ಮಂದಿ ಸಪ್ತರ್ಷಿಗಳ ಮೂರ್ತಿ ಗಳು ಬಿರುಗಾಳಿ ಬೀಸಿದ್ದರಿಂದ ಕುಸಿದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next