Advertisement

ಕರಾವಳಿಯಲ್ಲಿ ಭಾರೀ ಮಳೆ; ಜೂನ್. 26ರವರೆಗೆ ಆರೆಂಜ್ ಅಲರ್ಟ್​ ಘೋಷಣೆ

01:30 AM Jun 25, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಬಿರುಸು ಪಡೆಯುವ ನಿರೀಕ್ಷೆ ಇದ್ದು, ಜೂ.25 ಮತ್ತು 26ರಂದು ಆರೆಂಜ್‌ ಅಲರ್ಟ್‌ ಘೊಷಿಸಲಾಗಿದೆ.

Advertisement

ಈ ವೇಳೆ ಧಾರಾಕಾರ ಮಳೆ, ಗುಡುಗು ಸಹಿತ ಗಾಳಿ ಕೂಡ ಇರಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಶುಕ್ರವಾರ ಮಳೆಯಾಗಿತ್ತು. ಹವಾಮಾನ ಇಲಾಖೆ ಮಾಹಿತಿಯಂತೆ ಶುಕ್ರವಾರ ಮಂಗಳೂರಿನಲ್ಲಿ 29.1 ಡಿ.ಸೆ. ಗರಿಷ್ಠ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಉಡುಪಿ: ಸಾಧಾರಣ ಮಳೆ:   ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತಾದರೂ ನಿರಂತರ ಮಳೆ ಸುರಿಯಲಿಲ್ಲ.

ಜೂ.23ರಂದು ಸುರಿದ ಮಳೆಗೆ ಮೂಡನಿಡಂಬೂರಿನ ನಿತ್ಯಾನಂದ ಅವರ ಮನೆಯ ಮೇಲೆ ಗಾಳಿ ಮಳೆಯಿಂದಾಗಿ ಮರಬಿದ್ದು, ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿದೆ.

Advertisement

ಹಿರೇಬೆಟ್ಟು ಗ್ರಾಮದ ಲೀಲಾಶೆಟ್ಟಿ ಅವರ ಮನೆ ಗಾಳಿ-ಮಳೆಯಿಂದ ಬಿರುಕುಗೊಂಡು ಭಾಗಶಃ ಹಾನಿಯಾಗಿದೆ. 2.5 ಲ.ರೂ.ನಷ್ಟ ಉಂಟಾಗಿದೆ. 80 ಬಡಗಬೆಟ್ಟುವಿನ ಅನಂತ ನಾಯಕ್‌ ಅವರ ಮನೆಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next