Advertisement

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

09:15 AM Apr 20, 2024 | Team Udayavani |

ಬೆಳ್ತಂಗಡಿ: ಬಿರು ಬೇಸಿಗೆಯಿಂದ ಒಮ್ಮೆ ಮಳೆ ಸುರಿಯಲಿ ಎಂದು ಪ್ರಾರ್ಥಿಸುತ್ತಿದ್ದ ಕೃಷಿಕರು, ಜನಸಾಮಾನ್ಯರಿಗೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳ್ತಂಗಡಿ ತಾಲೂಕಿನಾದ್ಯಂತ ಸುರಿದ ಮುಂಗಾರು ಪೂರ್ವ ಭಾರಿ ಮಳೆ ಹರ್ಷ ತಂದಿದೆ.

Advertisement

ರಾಷ್ಟ್ರೀಯ ಹೆದ್ದಾರಿ ತಂದ ಅವಾಂತರ:

ಕಳೆದ ಒಂದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ 73 ರಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯನ್ನು ಸಂಪೂರ್ಣ ಅಗೆದು ಮಣ್ಣಿನ ರಸ್ತೆಯಾಗಿಸಿದ್ದರಿಂದ ಹೆದ್ದಾರಿ ಸಂಚಾರ ಸಂಪೂರ್ಣ ಧೂಳುಮಯವಾಗಿತ್ತು.

ಇದೀಗ ಏಕಾಏಕಿ ಮಳೆ ಸುರಿದ ಪರಿಣಾಮ ರಸ್ತೆ ಕೆಸರುಮಯವಾಗಿರುವುದಲ್ಲದೆ  ವಾಹನ ಸವಾರರು ಸ್ಕೇಟಿಂಗ್ ನಲ್ಲಿ ಸಾಗಿದಂತಾಗಿದೆ. ಶುಕ್ರವಾರ ರಾತ್ರಿ ಹಲವಾರು ದ್ವಿಚಕ್ರ ವಾಹನ ಬಿದ್ದು ಆಘಾತವಾಗಿದ್ದು, ಶನಿವಾರ ಮುಂಜಾನೆ ಮಳೆಗೆ ಸಂಪೂರ್ಣ ಸಂಚಾರ ಅಯೋಮಯವಾಗಿದೆ.

Advertisement

ಈ ರೀತಿ ಅವೈಜ್ಞಾನಿಕ ಅಭಿವೃದ್ಧಿಗೆ ನೇರವಾಗಿ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ಹೊಣೆಯಾಗಿದೆ. ರಸ್ತೆ ನಿರ್ಮಿಸುವಾಗ ಒಂದು ಬದಿ ರಸ್ತೆ ನಿರ್ಮಿಸಿ ಬಳಿಕ‌ ಮತ್ತೊಂದು ಭಾಗ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ಎಲ್ಲ ರಸ್ತೆಯನ್ನು ಮಣ್ಣಿ ರಸ್ತೆಯಾಗಿಸಿ, ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಚಿಂತಾಜನಕವಾಗಿದೆ.

ದೂರದೂರಿಂದ ಬರುವ ಪ್ರವಾಸಿಗರು ತುರ್ತು ಆಂಬ್ಯುಲೆನ್ಸ್ ಸಾಗಾಟಕ್ಕೂ ಸಾಧ್ಯವಾಗದ ಸ್ಥಿತಿ ಉಜಿರೆಯಿಂದ ಚಾರ್ಮಾಡಿ ರಸ್ತೆಯದ್ದಾಗಿದೆ.

ಉಜಿರೆಯಿಂದ ಸಾಗುವ ರಸ್ತೆ ಮುಂಡಾಜೆ ಸಿಟಿಯವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಿಂದ ಗ್ರಾಮಸ್ಥರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಹೆದ್ದಾಗಿ ಇಲಾಖೆಗೆ ಪ್ರಶ್ನಿಸದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next