Advertisement

ಹಳಿ ಮೇಲೆ ನಿಂತ ಮಳೆ ನೀರು : ಸಾಗರದಿಂದ ಹೊರಡಲಿದೆ ತಾಳಗುಪ್ಪ-ಮೈಸೂರು ರೈಲು

02:50 PM Jul 23, 2021 | Team Udayavani |

ಶಿವಮೊಗ್ಗ: ಭಾರೀ ಮಳೆ ಪರಿಣಾಮ ತಾಳಗುಪ್ಪ ತಲುಪಲು ರೈಲು ವಿಫಲವಾಗಿದ್ದು. ಇಂದು ಮಧ್ಯಾಹ್ನ ಸಾಗರ ರೈಲ್ವೆ ನಿಲ್ದಾಣದಿಂದಲೇ ಮೈಸೂರು ಕಡೆ ಪ್ರಯಾಣ ಬೆಳೆಸಲಿದೆ.

Advertisement

ಎರಡು ದಿನದಿಂದ ಮಳೆಯಾಗುತ್ತಿರುವ ಪರಿಣಾಮ ರೈಲು ಹಳಿ ಮೇಲೆ ನೀರು ನಿಂತಿದ್ದು ಮುಂಜಾಗ್ರತೆ ಕ್ರಮವಾಗಿ ರೈಲನ್ನು ಸಾಗರ ತಾಲ್ಲೂಕು ರೈಲು ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ. ಇಂದು ತಾಳಗುಪ್ಪದಿಂದ ಹೊರಡಬೇಕಿದ್ದ ರೈಲು ಮಧ್ಯಾಹ್ನ 3.45 ಸಾಗರದಿಂದಲೇ ಹೊರಡಲಿದೆ.

ಗುಡ್ಡಕುಸಿತ : ತೀರ್ಥಹಳ್ಳಿ-ಶಿವಮೊಗ್ಗ ಸಂಚಾರ ಬಂದ್ ಸಾಧ್ಯತೆ

ಮೂರು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯ ಭಾರತೀಪುರ ಸಮೀಪ ಗುಡ್ಡ ಕುಸಿದಿದ್ದು ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ತೀರ್ಥಹಳ್ಳಿ, ಆಗುಂಬೆ, ಉಡುಪಿ, ಮಂಗಳೂರು ಹೋಗುವವರಿಗೆ ಇದೇ ಪ್ರಮುಖ ಮಾರ್ಗವಾಗಿದ್ದು ಸಂಆರ ಬಂದ್ ಆಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುಡ್ಡದ ಮಣ್ಣು ತೆರವುಗೊಳಿಸಿ ಆತಂಕ ನಿವಾರಿಸಬೇಕಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next