Advertisement

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

06:53 PM Jul 08, 2024 | Team Udayavani |

ಪಣಜಿ: ಭಾರೀ ಮಳೆಯಿಂದಾಗಿ ಗೋವಾದ ಕುಂಡಯಿನಲ್ಲಿ ರಕ್ಷಣಾ ಗೋಡೆ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಮೃತರನ್ನು ದಿಲೀಪ್ ಯಾದವ್ (37), ಮುಖೇಶ್ ಕುಮಾರ್ ಸಿಂಗ್ (38) ಮತ್ತು ತ್ರಿಮಲ್ ನಾಯಕ್ (47) ಎಂದು ಗುರುತಿಸಲಾಗಿದೆ. ಜತೆಗೆ ಅಂಕಿತ್ ಕುಮಾರ್ ಯಾದವ್ ಎಂಬ ಕಾರ್ಮಿಕ ಗಾಯಗೊಂಡಿದ್ದಾರೆ.

ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಪ್ರವಾಹ ಉಂಟಾಗಿದ್ದರೆ, ಕೆಲವೆಡೆ ರಸ್ತೆಯ ಮೇಲೆ ಗುಡ್ಡ ಕುಸಿದಿದೆ , ರಕ್ಷಣಾ ಗೋಡೆಗಳು ಕುಸಿದಿವೆ. ಭಾರೀ ಮಳೆಯಿಂದಾಗಿ ಕುಂಡಯಿನಲ್ಲಿ ಇದೇ ರೀತಿಯ ಅವಘಡ ಸಂಭವಿಸಿದೆ. ಇಲ್ಲಿನ ಕೈಗಾರಿಕಾ ವಸಾಹತು ಬಳಿಯ ರಕ್ಷಣಾ ಗೋಡೆ ಕೋಣೆಯೊಂದರ ಮೇಲೆ ಕುಸಿದಿದೆ. ಈ ಕೊಠಡಿಯಲ್ಲಿ ಕೆಲವು ವಲಸೆ ಕಾರ್ಮಿಕರು ತಂಗಿದ್ದರು. ಹೊರಗೆ ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಅವರು ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಏಕಾಏಕಿ ಕೊಠಡಿಯ ಮೇಲೆ ರಕ್ಷಣಾ ಗೋಡೆ ಕುಸಿದು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಘಟನಾಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next