Advertisement

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

10:07 AM Apr 20, 2024 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ಬೆಳ್ಳಂಬೆಳಗ್ಗೆ ಗುಡುಗು-ಸಿಡಿಲಿನ ಮಧ್ಯೆ ವರುಣಾರ್ಭಟ ಆರಂಭವಾಗಿದೆ.

Advertisement

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಉಂಟಾಗಿತ್ತು. 8 ಗಂಟೆಯ ನಂತರ ಗುಡುಗು-ಸಿಡಿಲಿನ ಆರ್ಭಟದ ನಡುವೆ ಮಳೆ ಆರಂಭವಾಯಿತು.

ಗಂಟೆಗೂ ಅಧಿಕ ಕಾಲ‌ ಧಾರಾಕಾರ‌ ಮಳೆ ಸುರಿಯುತ್ತಿದ್ದು, ರೈತರಲ್ಲಿ ಹರ್ಷವನ್ನುಂಟು ಮಾಡಿದೆ. ಮುಂಗಾರು ಆರಂಭಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸಿದ್ದು, ಸಂತಸ ಹೆಚ್ಚಾಗುವಂತೆ ಮಾಡಿದೆ.

ಏ. 13ರಿಂದ ಅಶ್ವಿನಿ ಮಳೆ ಆರಂಭವಾಗಿದ್ದು, ವಾರದೊಳಗೆ ಜಿಲ್ಲೆಯಲ್ಲಿ ಮೂರು ಮಳೆಯಾಗಿದ್ದು, ಮಳೆ ಉತ್ತಮವಾಗುವ ನಿರೀಕ್ಷೆ ಹೆಚ್ಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next