Advertisement
ಗುರುವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ತಾಸು 208 ಮಿ.ಮೀ. ಅತ್ಯಧಿಕ ಮಳೆ ದಾಖಲಾಗಿದೆ. ಸೌಪರ್ಣಿಕಾ, ವಾರಾಹಿ, ಚಕ್ರ, ಎಡಮಾವಿನಹೊಳೆ ಮೊದಲಾದ ನದಿಗಳು ಉಕ್ಕಿ ಹರಿದಿವೆ. ನದಿ ಪಾತ್ರಗಳಲ್ಲಿ ನೆರೆಸೃಷ್ಟಿಯಾಗಿ ತಗ್ಗು ಪ್ರದೇಶ ಹಾಗೂ ಕೃಷಿಭೂಮಿ ಜಲಾವೃತಗೊಂಡಿವೆ. ನಾವುಂದ ಪರಿಸರದಲ್ಲಿ ಪ್ರವಾಹದಿಂದ ನೂರಾರು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
Related Articles
Advertisement
ವಿವಿಧೆಡೆ ಕಡಲ್ಕೊರೆತ:
ಜಿಲ್ಲೆಯ ಬೈಂದೂರು, ಕುಂದಾಪುರ, ಕಾಪು, ಉಡುಪಿ, ಪಡುಬಿದ್ರಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಕಡಲ್ಕೊರೆತ ತೀವ್ರಗೊಂಡಿದೆ.
19.58 ಲಕ್ಷ ನಷ್ಟ:
ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಬಿಟ್ಟು ಬಿಟ್ಟು ವಿದ್ಯುತ್ ವ್ಯತ್ಯಯವಾಗಿತ್ತು. ಗುರುವಾರ ಮೆಸ್ಕ್ಗೆ 19.58 ಲಕ್ಷ ರೂ. ಒಟ್ಟು ನಷ್ಟ ಸಂಭವಿಸಿದೆ. 6 ಪರಿವರ್ತಕ(ಟಿಸಿ), 84 ವಿದ್ಯುತ್ ಕಂಬಗಳು ಹಾಗೂ 1.65 ಮೀಟರ್ ವಿದ್ಯುತ್ ತಂತಿಗೆ ಹಾನಿಯಾಗಿವೆ.
ಉಚಿತ ಸಹಾಯವಾಣಿ:
ಜಿಲ್ಲೆಯ ತುರ್ತು ಸೇವೆಗೆ ಉಚಿತ ಸಹಾಯವಾಣಿ: 1077 ಮತ್ತು 0820-2574802
ವಿವಿಧೆಡೆ ಕೃತಕ ನೆರೆ :
ಬೈಂದೂರು ತಾಲೂಕಿನ ವಿವಿಧೆಡೆ ನೆರೆ ಉಂಟಾಗಿದ್ದು, ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಕುಂದಾಪುರದಲ್ಲಿ 7 ಮನೆ, 2 ಜಾನುವಾರು ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದ್ದು, ಒಟ್ಟು 4.50 ಲಕ್ಷ ರೂ. ನಷ್ಟ ಸಂಭವಿಸಿದೆ. ಬೈಂದೂರಲ್ಲಿ 1 ಮನೆ ಸಂಪೂರ್ಣ ಹಾಗೂ 2 ಮನೆಗೆ ಭಾಗಶಃ ಹಾನಿಯಾಗಿದ್ದು, ಅಪಾರ ಪ್ರಮಾಣದ ಕೃಷಿ ಪ್ರದೇಶ ಜಲಾವೃತಗೊಂಡಿವೆ.