Advertisement

ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆ; ಕೆಲವೆಡೆ ಹಾನಿ

12:18 AM Jul 15, 2022 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿರುಸಿನಿಂದ ಕೂಡಿದ ಮಳೆಯಾಗಿದ್ದು, ಹಾನಿ ಸಂಭವಿಸಿದೆ. ಉಡುಪಿ ಜಿಲ್ಲೆಯ ವಿವಿಧೆಡೆ ಬಿಟ್ಟು ಬಿಟ್ಟು ಮಳೆಯಾಗಿದೆ.

Advertisement

ಬೆಳ್ತಂಗಡಿ ತಾ|ನಲ್ಲಿ ಬಿರುಸಿನ ಮಳೆಯಾಗಿದ್ದು, ಚಾರ್ಮಾಡಿ ಘಾಟಿ ಬಳಿ ಭೂ ಕುಸಿತವಾಗಿದೆ. ಉಜಿರೆಯ ಮುಖ್ಯ ರಸ್ತೆ ಜಲಾವೃತಗೊಂಡಿದ್ದು, ಕೃತಕ ನೆರೆ ಆವರಿಸಿದೆ. ಲಾೖಲ ಸಮೀಪ ವಿದ್ಯುತ್‌ ಪರಿವರ್ತಕದ ಮೇಲೆ ಮರ ಬಿದ್ದು, 7 ವಿದ್ಯುತ್‌ ಕಂಬಗಳಿಗೆ ಹಾನಿ ಸಂಭವಿಸಿದೆ. ಕಾಶಿಬೆಟ್ಟು ಸಮೀಪ ಮೋರಿ ಕುಸಿತ

ಗೊಂಡಿದೆ. ತಾಲೂಕಿನ ವಿವಿಧೆಡೆ ಎಂಟಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗುವ ಸ್ಥಿತಿಯಲ್ಲಿದೆ.

ಮಂಗಳೂರು ನಗರದಲ್ಲಿ ಆಗಾಗ್ಗೆ ಬಿಟ್ಟು ಬಿಟ್ಟು ಮಳೆಯಾಗಿದ್ದು,  ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣವಿತ್ತು. ಗಾಳಿ ಮಳೆಗೆ ಮಂಗಳೂರಿನ ಕೆ.ಎಸ್‌. ರಾವ್‌ ರಸ್ತೆಯ ಗಣೇಶ್‌ ಮಹಲ್‌ ಬಳಿ ತಗಡಿನ ಶೀಟು ಬಿದ್ದು, ಅಲ್ಲೇ ನಿಲ್ಲಿಸಲಾಗಿದ್ದ ಸುಮಾರು 6 ಕಾರುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಳಿ-ಮಳೆಯಿಂದಾಗಿ ಉಳ್ಳಾಲ ಪರಿಸರದ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಚ್ಚಿಲದ ಬಟ್ಟಪ್ಪಾಡಿ ಮತ್ತು ಉಳ್ಳಾಲದ ಸೀ ಗ್ರೌಂಡ್‌ ಪ್ರದೇಶದಲ್ಲಿ ಕಡಲ್ಕೊರೆತ ಮುಂದುವರೆದಿದೆ. ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಜಾಲೂÕರು, ಕಲ್ಮಕಾರು, ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ, ಬಂಟ್ವಾಳ, ಸುರತ್ಕಲ್‌, ಉಳ್ಳಾಲ, ಮೂಡುಬಿದಿರೆ ಸಹಿತ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ಉಪ್ಪಿನಂಗಡಿ: ರಾ.ಹೆದ್ದಾರಿಗೆ ಬಿದ್ದ ಮರ :

Advertisement

ಉಪ್ಪಿನಂಗಡಿ: ಗುರುವಾರ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ.

ಉಪ್ಪಿನಂಗಡಿ ಪೇಟೆಯ ಹಲವೆಡೆ ಕಟ್ಟಡಗಳ ಮೇಲ್ಛಾವಣಿ  ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಹಾನಿಗೀಡಾದರೆ, ಪೇಟೆಯ ಪೀಟೋಪಕರಣ ಮಳಿಗೆಯ ಗಾಜುಗಳು  ಗಾಳಿಯ ರಭಸಕ್ಕೆ ಒಡೆದು ಹೋಗಿವೆೆ. ಪೆರ್ನೆ ಬಳಿ ಮರವೊಂದು ಹೆದ್ದಾರಿಗಡ್ಡವಾಗಿ ಬಿದ್ದು, ವಿದ್ಯುತ್‌  ಕಂಬಗಳು  ಹಾನಿಗೀಡಾಗಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿತ್ತು. ಹೆದ್ದಾರಿ ಸಂಚಾರಕ್ಕೆ ಕೆಲ ಸಮಯ ಅಡೆ ತಡೆಯುಂಟಾಗಿದೆ.       ಬಿರುಗಾಳಿಯ ಹೊಡೆತಕ್ಕೆ  ಉಪ್ಪಿನಂಗಡಿಯ ಮಠ, ಪೆರಿಯಡ್ಕ, ಸುಬ್ರಹ್ಮಣ್ಯ ಕ್ರಾಸ್‌  ಪರಿಸರದಲ್ಲಿ ಮರ ಬಿದ್ದು, ಛಾವಣಿಗೆ ಹಾಕಲಾದ ಶೀಟುಗಳು ಹಾರಿ ಹೋಗಿ ಹಾನಿಯುಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಹೆದ್ದಾರಿ ಬದಿಯ ಬೃಹತ್‌ ಮರವೊಂದು ಗಾಳಿ ಮಳೆಗೆ ಕಾಂಕ್ರಿಟ್‌ ರಸ್ತೆಯ ಮೇಲೆ ಬಿದ್ದಿದೆ. ಇಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಮರದ ಬುಡದ ಮಣ್ಣು ತೆಗೆಯಲಾಗಿದ್ದು ಇದರಿಂದಾಗಿ ಮರಬಿದ್ದಿದೆ. ಹೆದ್ದಾರಿಯ ಎರಡು ಬದಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಉಡುಪಿ ಜಿಲ್ಲೆ: ಉತ್ತಮ ಮಳೆ :

ಉಡುಪಿ: ಉಡುಪಿ, ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ರಭಸವಾಗಿ ಗಾಳಿ ಕೂಡ ಬೀಸಿದ್ದು, ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಬೆಳ್ಮಣ್‌ ಗ್ರಾಮದ ಪಡು ಬೆಳ್ಮಣ್‌ ಮಹಾಲಿಂಗೇಶ್ವರ ದೇಗುಲದ ಮೇಲ್ಛಾವಣಿ ಗಾಳಿಗೆ ಹಾರಿ ಬಿದ್ದಿದೆ.

ಮಳೆ ಹಾನಿ: ಮೂಡುಬಿದಿರೆ ವೀರಭದ್ರ ದೇಗುಲಕ್ಕೆ ಹಾನಿ :

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದುಹೋಗುವ, ಮೂಡು ಬಿದಿರೆಯ ಕಲ್ಸಂಕ ಬಳಿ ಇರುವ  ಪುರಾತನ ಶ್ರೀ ವೀರಭದ್ರ ದೇವಸ್ಥಾನದ ಉತ್ತರ ಭಾಗದ ಮಣ್ಣಿನ ಗೋಡೆ ಕುಸಿದುಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next