Advertisement

ಹೆಬ್ರಿ ಸುತ್ತಮುತ್ತ ಭಾರಿ ಮಳೆ : ಕೃಷಿ ಭೂಮಿಗೆ ನುಗ್ಗಿದ ನೀರು, ಅಪಾರ ನಷ್ಟ

05:13 PM Jul 04, 2022 | Team Udayavani |

ಹೆಬ್ರಿ : ಹೆಬ್ರಿ ಸುತ್ತಮುತ್ತ ಸೋಮವಾರ ಭಾರಿ ಮಳೆಯಾಗಿದ್ದು ಕೃಷಿ ಭೂಮಿಗೆ ನೀರು ನುಗ್ಗಿದ ಪರಿಣಾಮ ಅಪಾರ ನಷ್ಟವಾಗಿದೆ.

Advertisement

ಹೆಬ್ರಿ, ಶಿವಪುರ, ಕುಚ್ಚೂರು ಕಣ್ಬಿಟ್ಟು, ಸೀತಾನದಿ, ಸೋಮೇಶ್ವರ, ಕಬ್ಬಿನಾಲೆ, ವರಂಗ, ಮುದ್ರಾಡಿ ಮೊದಲಾದ ಪ್ರದೇಶಗಳಲ್ಲಿ ಭಾರಿ ಮಳೆಯ ಪರಿಣಾಮ ಗದ್ದೆಗಳಿಗೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ವರಂಗ ಗ್ರಾಮದ ಕಲ್ಯಾಣಿ ಪೂಜಾರ್ತಿಯವರ ನೇಜಿ ಗದ್ದೆಗೆ ನೀರು ನುಗ್ಗಿದ ಪರಿಣಾಮ ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ. ಅಂಡಾರಿನ ರಾಜೇಶ್ ಹಾಗೂ ಗಣಪತಿ ಅವರ ಕೃಷಿ ಭೂಮಿಗೆ ನೀರು ನುಗ್ಗಿದ ಪರಿಣಾಮ ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ.

ಕುಚ್ಚೂರು ಕಾನ್ ಬೆಟ್ಟು ಪ್ರದೇಶದಲ್ಲಿ ನೆರೆ ನೀರು ತೋಟ ಗದ್ದೆಗಳಿಗೆ ನುಗ್ಗಿ ರಸ್ತೆ ಮೇಲೆ ಹಾದು ಹೋದ ಪರಿಣಾಮ ಕೆಲವೊಂದು ರಸ್ತೆ ಸಂಚಾರ ಸಮಸ್ಯೆಯಾಗಿತ್ತು. ಶಿವಪುರ ಹೊಳೆ ನೀರು ಮೇಲೆ ಬಂದ ಪರಿಣಾಮ ಕೃಷಿ ಗದ್ದೆ ತೋಟಗಳು ಜಲಾವೃತಗೊಂಡಿವೆ.

ಇದನ್ನೂ ಓದಿ : ಅಮೃತ್ ಪೌಲ್ ಜತೆಗೆ ಸಚಿವರ ಹೆಸರನ್ನೂ ಬಹಿರಂಗಪಡಿಸಲಿ: ಕಾಂಗ್ರೆಸ್ ಆಗ್ರಹ

ಕಿರು ಸೇತುವೆ ಮುಳುಗಡೆ : ನಾಡ್ಪಾಲು ಗ್ರಾಮದ ತಿಂಗಳೆ ಗರಡಿ ಬಳಿ ಇರುವ ಬಡಾತಿಂಗಳೆಗೆ ಹೋಗುವ ಕಿರು ಸೇತುವೆ ಭಾರೀ ಮಳೆಯಿಂದ ಮುಳುಗಡೆಯಾಗಿದೆ .
ಹೆಬ್ರಿ ಸುತ್ತಮುತ್ತಲಿನ ಪ್ರಮುಖ ಮಾರ್ಗಗಳು ಚರಂಡಿ ಸಮಸ್ಯೆಯಿಂದ ರಸ್ತೆಯಲ್ಲಿ ನೀರು ಹರಿದ ಪರಿಣಾಮ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಸೀತಾ ನದಿ ಉಕ್ಕಿ ಹರಿದ ಪರಿಣಾಮ ಸೀತಾನದಿ ರಸ್ತೆ ತಟದವರೆಗೆ ನೀರು ಬಂದು ಕೃಷಿ ತೋಟಗಳು ಜಲಾವೃತಗೊಂಡಿದೆ .

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next