Advertisement

ಧಾರವಾಡ : ಭಾರಿ ಮಳೆಗೆ ಮನೆಗೋಡೆ ಕುಸಿದು ತಾಯಿ ಸೇರಿ ನಾಲ್ವರು ಮಕ್ಕಳಿಗೆ ಗಾಯ

08:57 AM Sep 14, 2022 | Team Udayavani |

ಧಾರವಾಡ ; ಸತತ ಮಳೆಯಿಂದ ತಾಲೂಕಿನ ತಡಕೋಡ ಗ್ರಾಮದ ಹರಿಜನ‌ ಕಚೇರಿಯಲ್ಲಿನ‌ ಮನೆಯ ಗೋಡೆಯೊಂದು ಕುಸಿದು ತಾಯಿ ಹಾಗೂ ನಾಲ್ಕು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

Advertisement

ತಡಕೋಡ ಗ್ರಾಮದ ಹರಿಜನಕೆರಿಯ ರುದ್ರಪ್ಪ ಮೇಲಿನಮನಿ ಎಂಬುವವರ ಮನೆ ಅತಿಯಾದ ಮಳೆಯಿಂದಾಗಿ ಬುಧವಾರ ಬೆಳಗಿನ ಜಾವ ಎರಡು ಮನೆಗಳು ಕುಸಿದು ಬಿದ್ದು. ತಾಯಿ ಹಾಗೂ ೪ ಜನ ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬಸ್ಥರು ಗಾಯಗೊಂಡಿದ್ದಾರೆ. ಕುಟುಂಬದ ಹಿರಿಯಳಾದ ಲಕ್ಷ್ಮಿ ರುದ್ರಪ್ಪ ಮೇಲಿನಮನಿ (೪೭) ದೀಪಾ ಮೇಲಿನಮನಿ ವಯಸು (15) ನಂದಾ ಮೇಲಿನಮನಿ (13) ಸಂಗೀತಾ ಮೇಲಿನಮನಿ (11) ಶ್ರಾವಣಿ ಮೇಲಿನಮನಿ (9) ಒಟ್ಟು ನಾಲ್ಕು ಮಂದಿ ಗಾಯಗೊಂಡಿದ್ದು ಪ್ರಾಣಾಯಾಮದಿಂದ ಪಾರಾಗಿದ್ದಾರೆ.

ಅಕ್ಕ ಪಕ್ಕದ ಜನರೆಲ್ಲರೂ ಸೇರಿ ಕುಟುಂಬಸ್ಥರನ್ನು ರಕ್ಷಿಸಿದ್ದಾರೆ. ಗ್ರಾ.ಪಂ.ಸದಸ್ಯರು ಕೂಡಲೆ ಕಾರ್ಯ ಪ್ರವೃತ್ತರಾಗಿ ಗಾಯಗೊಂಡವರನ್ನು ತಮ್ಮ ವಾಹನಗಳಲ್ಲಿಯೇ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದಾರೆ.

ಇದನ್ನೂ ಓದಿ : ಕಾರ್ಕಳ : ಗುಂಡು ಹೊಡೆದುಕೊಂಡು ಸಾವಯವ ಕೃಷಿಕ ತೆಳ್ಳಾರು ಭಾಸ್ಕರ ಹೆಗ್ಡೆ ಆತ್ಮಹತ್ಯೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next