Advertisement

ಚಿಂಚೋಳಿ: ಧಾರಾಕಾರ ಮಳೆಗೆ  ಭರ್ತಿಯಾದ ಮುಲ್ಲಾಮಾರಿ ಜಲಾಶಯ

12:49 PM Sep 11, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ  ಕೆಳದಂಡೆ  ಮುಲ್ಲಾಮಾರಿ ಜಲಾಶಯ ಹಾಗೂ ಚನ್ನಪಟ್ಟಣ ಜಲಾಶಯ ಭರ್ತಿಯಾಗಿ 2 ಜಲಾಶಯದಿಂದ ಗೇಟ್ ಗಳ ಮೂಲಕ ನೀರು ಹರಿಬಿಡಲಾಗಿದೆ.

Advertisement

ಮುಲ್ಲಾಮಾರಿ ನದಿ ದಂಡೆಯಲ್ಲಿರುವ ತಾಜ್ಲಾಪುರ್ ಗೌಡನಹಳ್ಳಿ ಗಾರಂಪಳ್ಳಿ ಕನಕಪುರ ಗರಗಪಳ್ಳಿ ಪೋಲಕಪಳ್ಳಿ ಬ್ಯಾರೇಜ್ ಮೇಲೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ತಾಲ್ಲೂಕಿನ ಮುಲ್ಲಾಮಾರಿ ನದಿ ಉಕ್ಕಿ ಹರಿಯುತ್ತಿದೆ.

ಕುಂಜರ ವನ್ಯಜೀವಿಧಾಮದ ವ್ಯಾಪಕ ಧಾರಾಕಾರವಾಗಿ ಆರ್ಭಟದಿಂದ ಮಳೆಯಾಗುತ್ತಿದ್ದು ತೆಲಂಗಾಣದ ಕೊಹಿರ ನದಿ ತುಂಬಿ ಹರಿಯುತ್ತಿದೆ. ನದಿಯ ಕೆಳಭಾಗದಲ್ಲಿರುವ ಎತ್ತಪೋತ ಜಲಾಗಾರಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿವ ಜಲಧಾರೆ ಮೈದುಂಬಿ ಹರಿಯುತ್ತಿದೆ ಇದರಿಂದ ಜಲಧಾರೆಯನ್ನು ನೋಡಲು ವಿವಿಧ ಕಡೆಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಆನಂದ ಪಡುತ್ತಿದ್ದಾರೆ.

ಅಲ್ಲದೆ ಮಾಣಿಕಪುರ ಜಲಧಾರೆ ಕೂಡ ಮೈ ತುಂಬಿ ಹರಿಯುತ್ತಿದೆ. ತೆಲಂಗಾಣದ ಜಹೀರಾಬಾದ್ ಬೀದರಚಿಂಚೋಳಿ ತಾಂಡೂರು ಕುಂಚಾವರಂ ವಿವಿಧ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಮೈದುಂಬಿ ಹರಿಯುತ್ತಿರುವ ಜಲಧಾರೆಯನ್ನು ಕಣ್ತುಂಬ ನೋಡಿ ಸಂತಸ ಪಡುತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next