Advertisement
ಚಿಲ್ಲೆಡ್ ಮುಳುಗು ಸೇತುವೆ ಮುಳುಗಿದ್ದು ವಾಹನ ಸವಾರರು ಬದಲಿ ರಸ್ತೆ ಮೂಲಕ ಸಂಚರಿಸುತ್ತಿದ್ದಾರೆ. ಕೂಟೇಲು ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ ನಂತರ ಮುಡ್ಪಿನಡ್ಕ ಬೆಟ್ಟಂಪಾಡಿ ರಸ್ತೆ ಸಂಪರ್ಕ ಕಡಿತ ಗೊಳಿಸಲಾಗಿತ್ತು. ಈ ಭಾಗದ ಜನರಿಗೆ ಬೆಟ್ಟಂಪಾಡಿ ಸಂಪರ್ಕಕ್ಕೆ ಇದ್ದ ಏಕೈಕ ರಸ್ತೆ ಈ ದೇವಸ್ಯ ರಸ್ತೆಯಲ್ಲಿ ಒಂದು ತೋಡು ಇದ್ದು ಅದರಲ್ಲಿ ಈಗ ನೀರು ಯಥೇಚ್ಛವಾಗಿ ಬರುತ್ತಿದೆ. ಇಲ್ಲಿ ಮಳೆಗಾಲದಲ್ಲಿ ತೋಡು, ಬೇಸಿಗೆ ಕಾಲದಲ್ಲಿ ರೋಡು ಆಗಿದ್ದು ಈಗ ಮಳೆ ಜೋರಾಗಿ ಬರುವುದರಿಂದ ಸಂಚಾರಕ್ಕೆ ಆಗುತ್ತಿಲ್ಲ. ಆದುದರಿಂದ ವಿದ್ಯಾರ್ಥಿಗಳು, ದಿನಂಪ್ರತಿ ಕೆಲಸ ವ್ಯವಹಾರಗಳಿಗೆ ಹೋಗುವ ಜನರು ಇಲ್ಲಿ ಸಂಚರಿಸಲು ತೊಂದರೆಯಾಗಿದೆ. ಅಲ್ಲದೆ ಎಂಪೆಕಲ್ಲು ಬೆಟ್ಟಂಪಾಡಿ ಸಂಪರ್ಕ ರಸ್ತೆಯಲ್ಲಿ ಕೂಡ ಈಗ ಸಂಚಾರ ಸ್ಥಗಿತಗೊಂಡ ಕಾರಣ ಈ ಭಾಗದ ಜನರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಜೂ.30 ರಂದು ನಿಡ್ಪಳ್ಳಿ ಗ್ರಾಮದ ಕೂಟೇಲು ಪರಿಸರ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದ್ದು ಜನರು ಆತಂಕಗೊಂಡಿದ್ದಾರೆ.
Related Articles
Advertisement
ಇದನ್ನೂ ಓದಿ : ಚಿಕ್ಕೋಡಿ: ರೈತರ ಆರ್ಥಿಕ ಮಟ್ಟ ಸುಧಾರಿಸಲು ಬಿಡಿಸಿಸಿ ಬ್ಯಾಂಕ್ ಪಾತ್ರ ಮುಖ್ಯ: ರಮೇಶ ಕತ್ತಿ
ಕೂಟೇಲು ಪರಿಸರದ ಸುಮಾರು ಆರು ಜನರ ತೋಟ ಕೆಂಪು ನೀರಿನಿಂದ ತುಂಬಿದ್ದು ಮಳೆ ಈಗೆಯೇ ಮುಂದುವರಿದರೆ ಅಡಿಕೆ, ತೆಂಗು, ಕಾಳುಮೆಣಸು ಕೃಷಿ ನಾಶವಾಗುವ ಸಂಭವ ಇದೆ ಎಂದು ಅತಂಕದಲ್ಲಿದ್ದಾರೆ.