Advertisement

ಬೆಳ್ತಂಗಡಿಯಲ್ಲಿ ದಿನವಿಡೀ ಉತ್ತಮ ಮಳೆ, ಹಾರಿ ಹೋದ ಸೂರು

10:38 PM May 13, 2023 | Team Udayavani |

ಬೆಳ್ತಂಗಡಿ: ಬಿಸಿಲಿನ ಬೇಗೆಯಿಂದ ತತ್ತರಿಸಿದ ತಾಲೂಕಿನ ಜನತೆ ಕೊಂಚ ನಿರಾಳರಾಗಿದ್ದಾರೆ. ಕಳೆದ ಎರಡು ಮೂರು ದಿನ ಗಳಿಂದ ಸಂಜೆಯಾಗುತ್ತಲೇ ಮಳೆಯಾಗುತ್ತಿದ್ದು, ಶನಿವಾರ ಮುಂಜಾನೆಯಿಂದಲೇ ಉತ್ತಮ ಮಳೆ ಸುರಿದಿದೆ.

Advertisement

ತಾಲೂಕಿನೆಲ್ಲೆಡೆ ಶನಿವಾರ ಮುಜಾನೆಯಿಂದ ಸಂಜೆವರೆಗೂ ನಿರಂತರ ಮಳೆಯಾಗಿದ್ದು, ಕೆಲವೆಡೆ ಮರಗಳು ಬಿದ್ದು ಹಾನಿಯಾಗಿದೆ. ಶುಕ್ರವಾರ ಸುರಿದ ಗಾಳಿ ಮಳೆಗೆ ಮದ್ದಡ್ಕ ತೋಟಗಾರಿಕೆ ಇಲಾಖೆಯ ಕಾಂಪೌಂಡಿಗೆ ಭಾರಿ ಗಾತ್ರದ ಮರ ಬಿದ್ದು ಹಾನಿಯಾಗಿದೆ.

ಮಳೆಯಿಂದಾಗಿ ಹಾನಿಗೊಳ ಗಾಗಿದ್ದ ವಿದ್ಯುತ್‌ ಕಂಬಗಳನ್ನು ಮೆಸ್ಕಾಂ ಇಲಾಖೆ ರಾತ್ರಿಹಗಲೆನ್ನದೆ ದುರಸ್ತಿಗೊಳಿಸಿದೆ. ಕೆಲವೆಡೆ ಹೆದ್ದಾರಿಗೆ ಬಾಗಿಕೊಂಡು ಮರಗಳು ಇದ್ದು ಮಳೆಗಾಲದಲ್ಲಿ ಅಪಾಯ ಉಂಟುಮಾಡುವಂತಿದೆ. ಟ್ರೀ ಟ್ರಿಮ್ಮಿಂಗ್‌ ಮಾಡದಿದ್ದಲ್ಲಿ ಅಪಾಯ ಎದುರಾಗಲಿದೆ.

**
ಕೊಕ್ಕಡ: ಹಾರಿ ಹೋದ ಸೂರು
ಬೆಳ್ತಂಗಡಿ: ಧರ್ಮಸ್ಥಳ ಸುಬ್ರಹ್ಮಣ್ಯ ಹೆದ್ದಾರಿಯ ಕೊಕ್ಕಡ ಜೋಡುಮಾರ್ಗ ನಿವಾಸಿ ಗೋಪಾಲಕೃಷ್ಣ ಭಟ್‌ ಅವರ ವಾಸದ ಮನೆಯ ಶೀಟ್‌ ಛಾವಣಿಯು ಭಾರೀ ಗಾಳಿ ಮಳೆಯಿಂದಾಗಿ ಹಾರಿ ಹೋಗಿದ್ದು ವೃದ್ಧ ದಂಪತಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಾಜು 1.5 ಲಕ್ಷ ರೂ.ಗಿಂತಲೂ ಹೆಚ್ಚಿನ ನಷ್ಟ ಸಂಭವಿಸಿದ್ದು ವೃದ್ಧ ದಂಪತಿ ಸರಕಾರದ ನೆರವಿನ ದಾರಿ ನೋಡುತ್ತಿದ್ದಾರೆ. ಘಟನೆ ಸಂಭವಿಸಿ 2 ದಿನವಾದರೂ ಸ್ಥಳೀಯ ಪಂಚಾಯತ್‌, ತಾಲೂಕು ಕಂದಾಯ ಇಲಾಖೆ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷé ತೋರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next