Advertisement

ಕೈತುಂಬ ಸಾಲ; ಊಟದಲ್ಲಿ ವಿಷ ಬೆರೆಸಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ

03:00 PM Jan 13, 2023 | Team Udayavani |

ಶಿವಮೊಗ್ಗ: ಸಾಲಗಾರರ ಕಾಟ ತಾಳಲಾರದೆ ತಮ್ಮ ಸಾಕು ಮಗನೊಂದಿಗೆ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Advertisement

ವಿಷ ಸೇವಿಸಿದ ವೃದ್ದರಾದ ಪ್ರತಾಪ (70) ಮತ್ತು ದಾನಮ್ಮ (63) ದಂಪತಿಗಳು ಮನೆಯಲ್ಲೇ ಸಾವನ್ನಪ್ಪಿದರೆ, ಅಸ್ವಸ್ಥರಾಗಿದ್ದ ಮಗ ಮಂಜುನಾಥ್ (25) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಶಿವಮೊಗ್ಗದ ಮಿಳಘಟ್ಪದ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಕುಟುಂಬವು ಮನೆ ನಿರ್ವಹಣೆಗೆ ಸಾಲ ಮಾಡಿಕೊಂಡಿತ್ತು. ಸಾಕಿದ ಮಗನೂ ಪಾರ್ಶ್ವವಾಯು ಪೀಡಿತರಾದ ಹಿನ್ನೆಲೆಯಲ್ಲಿ ನಆತ ಕೂಡಾ ಮನೆಯಲ್ಲಿ ಹಾಸಿಗೆ ಹಿಡಿದಿದ್ದ. ಪತಿಗೆ ವಯಸ್ಸು ಆಗಿದ್ದರಿಂದ ಕೆಲಸವಿರಲಿಲ್ಲ. ಪತ್ನಿಯೇ ಕೊಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡಬೇಕಿತ್ತು.

ಇದನ್ನೂ ಓದಿ:ಭಾರತ ವಿರುದ್ಧದ ಟಿ20 ಸರಣಿಗೆ ಮಿಚೆಲ್ ಸ್ಯಾಂಟ್ನರ್ ಗೆ ಕಿವೀಸ್ ನಾಯಕತ್ವ

ಮನೆ ಬಾಡಿಗೆ ಕಟ್ಟಲಾಗದೇ ದಂಪತಿಗಳ ಪರದಾಟ ನಡೆಸುತ್ತಿದ್ದರು. ಕೈ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟದಿಂದಾಗಿ ಊಟದಲ್ಲಿ ವಿಷ ಬೆರೆಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next