Advertisement

ಕಿಷ್ಕಿಂದಾ ಅಂಜನಾದ್ರಿಯಲ್ಲಿ ಸಾಮಾಜಿಕ ಅಂತರ ಮರೆತು ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು

09:47 AM Jul 10, 2021 | Team Udayavani |

ಗಂಗಾವತಿ: ಸರಕಾರ ಕೋವಿಡ್ ಲಾಕ್ ಡೌನ್ ಸಡಿಲಿಕೆ ಮಾಡಿದ ಕಾರಣ ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಶನಿವಾರ ಬೆಳಿಗ್ಗೆ ಭಕ್ತರು  ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೆ ದೇವರ ದರ್ಶನಕ್ಕೆ ಮುಗಿಬಿದ್ದ ದೃಶ್ಯ ಕಂಡು ಬಂತು.

Advertisement

ಕಳೆದ ಮಾರ್ಚ್ 23 ರಿಂದ ಅಂಜನಾದ್ರಿಯನ್ನು ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿತ್ತು .ಇಂದು ಶನಿವಾರವಾಗಿದ್ದರಿಂದ ತಾಲ್ಲೂಕು ಮತ್ತು ಬೇರೆ ಜಿಲ್ಲೆಗಳಿಂದ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದರು. ನೂರಾರು ವಾಹನಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಬೆಟ್ಟವನ್ನು ಹತ್ತುವ ದೃಶ್ಯ ಕಂಡುಬಂತು. ಕೋವಿಡ್ ರೋಗದ ಹೆದರಿಕೆಯಿಲ್ಲದ ಜನರು ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ವಿಫಲವಾಗಿದ್ದರು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ದೇಗುಲ ಸಮಿತಿಯವರು ಹಾಕಿರುವ ಪ್ರಕಟಣೆಯನ್ನು ಭಕ್ತರು ನಿರ್ಲಕ್ಷಿಸಿದ್ದಾರೆ.

ಇದನ್ನೂ ಓದಿ:ಪ್ರವಾಸಿ ತಾಣಗಳಲ್ಲಿ ಹೆಚ್ಚುತ್ತಿರುವ ಜನ, ನಿಯಮಗಳತ್ತ ನಿರ್ಲಕ್ಷ್ಯ : 3ನೇ ಅಲೆಗೆ ಆಹ್ವಾನ?

ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಕೆಳಗಿನಿಂದ ಮೇಲಿನ ದೇಗುಲದವರೆಗೂ ಭಕ್ತರು ಸಾಮಾಜಿಕ ಅಂತರ ಮರೆತು ಕ್ಯೂ ನಿಂತಿದ್ದರು. ಆಗಾಗ ದೇವಸ್ಥಾನದವರು ಕೋವಿಡ್ ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಧ್ವನಿವರ್ಧಕದ ಮೂಲಕ ನೀಡುತ್ತಿದ್ದ ಪ್ರಕಟಣೆಯನ್ನು ಭಕ್ತರು ಗಮನಿಸುತ್ತಿರಲಿಲ್ಲ.

Advertisement

ಮೊದಲಿನಂತೆ ತೆಂಗಿನಕಾಯಿ ವ್ಯಾಪಾರ, ಕೇಸರಿ ಟವಲ್ ಗಳ ವ್ಯಾಪಾರ, ಹೂವು ಹಣ್ಣು, ಕೂಲ್ ಡ್ರಿಂಕ್ಸ್ ಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.ಬೆಟ್ಟದ ಕೆಳಗಿನ ವಾಹನಗಳ ಪಾರ್ಕಿಂಗ್ ತುಂಬಾ ವಾಹನಗಳ ನಿಂತಿದ್ದು ರಸ್ತೆಯುದ್ದಕ್ಕೂ ಸಹ ವಾಹನಗಳು ನಿಂತಿರುವ ದೃಶ್ಯ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next