Advertisement

ವಿಜಯಪುರದಲ್ಲಿ ಮಳೆಯಬ್ಬರ; ಪ್ರವಾಹದ ಹಳ್ಳದಾಚೆ ಹೊಲದಲ್ಲಿ ಸಿಕ್ಕಿಕೊಂಡವರ ರಕ್ಷಣೆ

10:05 AM Aug 04, 2022 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮಳೆಯ ನೀರಿನಿಂದಾಗಿ ಜಿಲ್ಲೆಯ ಹಳ್ಳಗಳು ತುಂಬಿ ಹರಿಯುತ್ತಿದೆ. ಪ್ರವಾಹದ ಹಳ್ಳದ ಆಚೆ ಸಿಲುಕಿದ್ದ ಜನ, ಜಾನುವಾರುಗಳನ್ನು ಗ್ರಾಮಸ್ಥರೇ ರಕ್ಷಣೆ ಮಾಡಿದ ಘಟನೆ ನಡೆದಿದೆ.

Advertisement

ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಆಲಗೂರು ಗ್ರಾಮದ ಬಳಿಯ ಹಳ್ಳ ಮಳೆ ನೀರಿನಿಂದ ಏಕಾಏಕಿ ಪ್ರವಾಹ ಸೃಷ್ಟಿಸಿದೆ. ಪರಿಣಾಮ ಹಳ್ಳದ ಆಚೆಯ ಜಮೀನಿನಲ್ಲಿ ಸಿಲುಕಿದ್ದ ಜನ ಹಾಗೂ ಜಾನುವಾರುಗಳನ್ನು ರಕ್ಷಿಸುವಲ್ಲಿ ಗ್ರಾಮಸ್ಥರೇ ಹರಸಾಹಸ ಪಟ್ಟು ರಕ್ಷಣಾ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಬಿಜೆಪಿಗೆ ಬಿಸಿ ತಂದ ಸಿದ್ದರಾಮೋತ್ಸವದ ಯಶಸ್ಸು : ಇಕ್ಕಟ್ಟಿಗೆ ಸಿಲುಕಿದ ಸಿಎಂ ಬೊಮ್ಮಾಯಿ

ಹಳ್ಳದ ಎರಡೂ ಬದಿಗೆ ಹಗ್ಗ ಕಟ್ಟಿದ ಆಲಗೂರು ಗ್ರಾಮಸ್ಥರು ಪ್ರವಾಹದಿಂದಾಗಿ ಜಮೀನಿನಲ್ಲಿ ಸಿಕ್ಕಿಕೊಂಡಿದ್ದ ಹತ್ತು ಮಂದಿಯನ್ನು, ಜಾನುವಾರುಗಳನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next