Advertisement

ಚಿಕ್ಕಮಗಳೂರು ಎಸ್ ಪಿ ಗೆ ಭಾವಪೂರ್ಣ ಬೀಳ್ಕೊಡುಗೆ: ಹೂಮಳೆಗೈದ ಸಿಬ್ಬಂದಿ

11:47 AM Aug 11, 2022 | Team Udayavani |

ಚಿಕ್ಕಮಗಳೂರು: ವರ್ಗಾವಣೆಗೊಂಡ ಎಸ್ ಪಿಗೆ ಸಿಬ್ಬಂದಿಗಳು ಹೂಮಳೆಗೈದು ಬೀಳ್ಕೊಟ್ಟ ಭಾವುಕ ಸನ್ನಿವೇಶವೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ. ಕಳೆದೆರಡು ವರ್ಷಗಳಿಂದ ಚಿಕ್ಕಮಗಳೂರು ಎಸ್ ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅಕ್ಷಯ್ ಅವರು ವರ್ಗಾವಣೆಗೊಂಡಿದ್ದಾರೆ.

Advertisement

ಎಸ್ ಪಿ ಅಕ್ಷಯ್ ಅವರಿಗೆ ಸಿಬ್ಬಂದಿಗಳು ಭಾವಪೂರ್ಣವಾಗಿ ಬೀಳ್ಕೊಡುಗೆ ನೀಡಿದರು. ತೆರೆದ ವಾಹನದಲ್ಲಿ ನಿಲ್ಲಿಸಿ ಹೂ ಮಳೆ ಸುರಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದರು.

ನಗರದ ಪೊಲೀಸ್ ಡಿ ಆರ್ ಮೈದಾನದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ತೆರೆದ ವಾಹನದಲ್ಲಿ ಅಕ್ಷಯ್ ಅವರನ್ನು ಕರೆ ತಂದ ಪೊಲೀಸರು ಅದ್ದೂರಿ ಸ್ವಾಗತ ಕೋರಿದರು. ಸಹ ಸಿಬ್ಬಂದಿಗಳ ಪ್ರೀತಿಗೆ ಎಸ್ ಪಿ ಅಕ್ಷಯ್ ಭಾವುಕರಾದರು.

ಇದನ್ನೂ ಓದಿ:ಸತ್ಯ ಏನೆಂದು ನನಗೆ ಗೊತ್ತು, ನನ್ನ ನಿರ್ಣಯಗಳು ಗಟ್ಟಿಯಾಗಿದೆ: ಬದಲಾವಣೆ ವದಂತಿ ಬಗ್ಗೆ ಸಿಎಂ

ಅಕ್ಷಯ್ ಅವರು ಕಳೆದೆರಡು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆ ಎಸ್ ಪಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಅವರಿಗೆ ಯಾವುದೇ ಸ್ಥಳ ಗೊತ್ತು ಮಾಡದೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರುಎಸಿಬಿಯಲ್ಲಿದ್ದ ಉಮಾ ಪ್ರಶಾಂತ್  ಅವರು ಚಿಕ್ಕಮಗಳೂರು ನೂತನ ಎಸ್ ಪಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next