Advertisement

Heart attack: ನಡುರಸ್ತೆಯಲ್ಲೇ ಹೃದಯಾಘಾತ: ಆಟೋ ರಿಕ್ಷಾ ಚಾಲಕ ದುರ್ಮರಣ

10:45 AM Aug 23, 2023 | Team Udayavani |

ಬೆಂಗಳೂರು:  ರಸ್ತೆ ಬದಿ ಆಟೋ ನಿಲ್ಲಿಸಿ ಟೀ ಕುಡಿಯಲು ತೆರಳುತ್ತಿದ್ದ ಆಟೋ ಚಾಲಕ ಹೃದಯಾಘಾತವಾಗಿ ನಡುರಸ್ತೆಯಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಸಂಪಂಗಿರಾಮನಗರ ನಿವಾಸಿ ತಿಮ್ಮೇಶ್‌(53) ಮೃತ ಆಟೋ ಚಾಲಕ. ಮಂಡ್ಯ ಮೂಲದ ತಿಮ್ಮೇಶ್‌ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಹಲವು ವರ್ಷಗಳಿಂದ ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದರು.

ಸಂಪಂಗಿರಾಮನಗರ 4ನೇ ಕ್ರಾಸ್‌ ಬಳಿ ಬೆಳಗ್ಗೆ 9.30ರ ಸುಮಾರಿಗೆ ಟೀ ಕುಡಿಯುವ ಸಲುವಾಗಿ ಆಟೋ ನಿಲುಗಡೆ ಮಾಡಿ ಕೆಳಗೆ ಇಳಿದ್ದಾರೆ. ಈ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಎದೆ ಉಜ್ಜಿಕೊಂಡು ರಸ್ತೆ ದಾಟಲು

ನಾಲ್ಕೈದು ಹೆಜ್ಜೆ ಹಾಕುತ್ತಿದ್ದಂತೆ, ನಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ತಿಮ್ಮೇಶ್‌ ನೆರವಿಗೆ ಧಾವಿಸಿದ್ದು, ಎದೆ ಉಜ್ಜಿ ನೀರು ಕುಡಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತಿಮ್ಮೇಶ್‌ ಹೃದಯಾ ಘಾತಕ್ಕೊಳಗಾಗಿ ಮೃತಪಟ್ಟಿ ದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ತಿಮ್ಮೇಶ್‌ ಕುಟುಂಬದವರು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂಪಂಗಿರಾಮನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next