Advertisement

ಮದುವೆ ಆರತಕ್ಷತೆ ವೇಳೆ‌ ಹೃದಯಾಘಾತದಿಂದ ವರ ಸಾವು

03:17 PM Jul 21, 2022 | Team Udayavani |

ಹೊಸಪೇಟೆ: ಮದುವೆ ಆರತಕ್ಷತೆ ಸಮಾರಂಭದಲ್ಲಿ ವರನಿಗೆ ತ್ರೀವ ಎದೆನೋವು‌ ಕಾಣಿಸಿಕೊಂಡು, ಕುಸಿದು‌ ಬಿದ್ದು ಸಾವನ್ನಪ್ಪಿದ‌ ದುರ್ಘಟನೆ  ತಾಲೂಕಿನ ಪಾಪಿನಾಯಕಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ಹೊನ್ನೂರು ಸ್ವಾಮಿ (26)ಹೃದಯಾಘಾತದಿಂದ  ಮೃತಪಟ್ಟ ಯುವಕ.

ಎದೆ ನೋವಿನಿಂದ ಕುಸಿದು ಬಿದ್ದ ವರ ಅಸ್ವಸ್ಥಗೊಂಡ ಹೊನ್ನೂರಸ್ವಾಮಿಯನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದ್ಯೊಯಲಾಯಿತು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಖಾಸಗಿ ವೈದ್ಯರು, ಸಲಹೆ ನೀಡಿದ್ದರು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ  ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬರ್ಬರವಾಗಿ ಹತ್ಯೆಗೈದು ಯುವತಿಯ ರುಂಡದೊಂದಿಗೆ ಠಾಣೆಗೆ ಆಗಮಿಸಿದ ಪಾಗಲ್ ಪ್ರೇಮಿ

ಸಡಗರ-ಸಂಭ್ರಮ‌ದಿಂದ ಕೂಡಿದ್ದ‌ ಮದುವೆ ಮನೆಯಲ್ಲಿ ನಡೆದ ಈ ಘಟನೆಯಿಂದ ನವವಧು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.  ನವವಧು-ವರವನ್ನು‌ ಹಾರೈಸಲು ಆಗಮಿಸಿದ್ದ ಬಂಧು-ಮಿತ್ರರು ದಿಗ್ಬ್ರಾಂತರಾಗಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next