Advertisement

ತೀರ್ಥಹಳ್ಳಿ : ಓಮ್ನಿಗೆ ಢಿಕ್ಕಿ ಹೊಡೆದ ಬೈಕ್‌ ; ಶಾಲಾ ಹೆಡ್‌ ಮಾಸ್ಟರ್‌ ಸ್ಥಳದಲ್ಲೇ ಸಾವು

05:38 PM Aug 06, 2022 | Team Udayavani |

ತೀರ್ಥಹಳ್ಳಿ : ಓಮ್ಮಿ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿ, ಶಾಲಾ ಹೆಡ್‌ ಮಾಸ್ಟರ್‌ ರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕಟ್ಟೆಹಕ್ಲು ಸಮೀಪ ನಡೆದಿದೆ.

Advertisement

ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್​ ವೆಂಕಟೇಶ್ (51) ಮೃತ ವ್ಯಕ್ತಿ. ವೆಂಕಟೇಶ್ ಕೊಪ್ಪ ತಾಲೂಕಿನ ಬೊಮ್ಲಾಪುರದ ಹುಕ್ಕಳಿಕೆಯವರು ಎಂದು ತಿಳಿದುಬಂದಿದೆ.

ಇದನ್ನೂ ಓದಿಕಾಮನ್ವೆಲ್ತ್ ಗೇಮ್ಸ್: ಐತಿಹಾಸಿಕ ಬೆಳ್ಳಿ ಗೆದ್ದ ಪ್ರಿಯಾಂಕಾ ಗೋಸ್ವಾಮಿ- ಅವಿನಾಶ್ ಸಬ್ಲೆ

ವೆಂಕಟೇಶ್  ಬೈಕ್​ನಲ್ಲಿ ಬರುತ್ತಿದ್ದಾಗ, ನಾಗರವಳ್ಳಿ ಸಮೀಪದ ರಸ್ತೆ ತಿರುವಿನಲ್ಲಿ  ವೇಗವಾಗಿ ಬರುತ್ತಿದ್ದ ಓಮ್ನಿಗೆ ಬೈಕ್​ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡ ವೆಂಕಟೇಶ್​ರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶಾಲೆಯ ಕೆಲಸದ ಸಲುವಾಗಿಯೇ ಹೊರಗಡೆ ಹೊರಟಾಗ ಈ ಅವಘಡ ಸಂಭವಿಸಿದೆ.

Advertisement

ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next