Advertisement

ಯಡಿಯೂರಪ್ಪ ಎಷ್ಟು ಸಣ್ಣ ಮನುಷ್ಯ, ಹೃದಯ ವೈಶಾಲ್ಯ ಇಲ್ಲ: ಎಚ್‌ಡಿಕೆ

12:22 PM May 27, 2018 | |

ಬೆಂಗಳೂರು: ಸಾಲಮನ್ನಾ ವಿಚಾರಕ್ಕೆ ರಾಜ್ಯ ಬಂದ್‌ಗೆ ಕರೆ ನೀಡಿರುವ ಬಿಜೆಪಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಕಿಡಿ ಕಾರಿದ್ದಾರೆ. 

Advertisement

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್‌ಡಿಕೆ ನನ್ನಲ್ಲಿ ಸಾಲ ಮನ್ನಾ ಮಾಡುವ ಬಗ್ಗೆ ಸ್ಪಷ್ಟತೆ, ಬದ್ಧತೆ ಇದೆ. ಸಾಲಮನ್ನಾ  ಮಾಡದಿದ್ರೆ ರಾಜೀನಾಮೆ ಕೊಡ್ತೇನೆ. ರೈತರು ನನಗೆ ಕಾಲಾವಕಾಶ ಕೋಡಬೇಕು.ಯಾರೂ ಆತ್ಮಹತ್ಯೆಗೆ ಮುಂದಾಗಬಾರದು. ಪೊಳ್ಳು ಮಾತುಗಳಿಗೆ ಗೌರವ ಕೊಡಲು ಹೋಗಬೇಡಿ ಎಂದು ಮನವಿ ಮಾಡಿದರು. 

ಇನ್ನೂ ಸಂಪುಟ ವಿಸ್ತರಣೆಯೇ ಸಾಧ್ಯವಾಗಿಲ್ಲ. ಕಾಂಗ್ರೆಸ್‌ನವರು ಹಣಕಾಸು ಹಣಕಾಸು ಖಾತೆ ನಮಗೆ ಕೊಡಿ ಅಂದಿದ್ದಾರೆ. ರೈತರು ಸ್ವಲ್ಪ ಸಮಯ ಕೊಡಿ, ಸಾಲ ಮನ್ನಾ ಮಾಡುವುದು ಖಚಿತ ಎಂದರು. 

ರೈತರು ಯಾಕೆ ಆತ್ಮಹತ್ಯೆ ಯಾಕೆ ಮಾಡಿಕೊಳ್ಳುತ್ತಿದ್ದೀರಿ ಎನ್ನುವುದು ನನಗೆ ಗೊತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳಿ ಮಾತ್ರವಲ್ಲದೆ  ಖಾಸಗಿಯವರಿಂದಲೂ  ಸಾಲ ಪಡೆದು ಮೀಟರ್‌ ಬಡ್ಡಿ ಕಟ್ಟುತ್ತಿರುವುದು ನನಗೆ ಗೊತ್ತಿದೆ. ಅದನ್ನು ಕಡಿವಾಣ ಹಾಕುವ ಕುರಿತು ನಾನು ಚಿಂತನೆ ನಡೆಸಿದ್ದೇನೆ ಎಂದರು. 

ಯಡಿಯೂರಪ್ಪ  ಎಷ್ಟು ಸಣ್ಣ ಮನುಷ್ಯ, ಆ ಮಹಾನುಭಾವನಿಗೆ ನಾನು ಏನು ಹೇಳಿದ್ದೇನೆ ಎನ್ನವ ವಿಡಿಯೋ ತುಣುಕು ಕಳುಹಿಸಿ.ಆ ಲನುಷ್ಯನಿಂದ ಹೇಳಿಸಿಕೊಳ್ಳಬೇಕಾಗಿಲ್ಲ.  ಕ್ಷುಲ್ಲಕ , ಕೀಳು ಮಟ್ಟ ದಲ್ಲಿ ನಡೆದುಕೊಳ್ಳುವುದನ್ನು ನಿಲ್ಲಿಸಿ,  ಸಣ್ಣ ತನ ಬಿಡಿ ಎಂದು ಕಿಡಿ ಕಾರಿದರು. 

Advertisement

ಯಡಿಯೂರಪ್ಪನವರು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕಾಗಿಲ್ಲ. ಅವರ ಅನುಭವಕ್ಕೆ ತಕ್ಕಂತೆ ನಮಗೆ ಸಲಹೆಗಳನ್ನು ಕೊಡಲಿ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next