Advertisement

ಮಂಗಳೂರು ವಿಮಾನ ನಿಲ್ದಾಣದಲ್ಲಿ  ಎಚ್‌ಡಿಡಿ ಕುಟುಂಬ!

01:00 AM Mar 08, 2019 | Team Udayavani |

ಮಂಗಳೂರು: ಶ್ರೀ ಕ್ಷೇತ್ರ ಶೃಂಗೇರಿಯಿಂದ ಬೆಂಗಳೂರಿಗೆ ವಾಪಸಾಗುವ ವೇಳೆ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿದ್ದ ಹೆಲಿಕಾಪ್ಟರ್‌ ಗುರುವಾರ ಮಧ್ಯಾಹ್ನ ಇಂಧನ ಭರ್ತಿ ಮಾಡುವುದಕ್ಕಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.

Advertisement

ದೇವೇಗೌಡ ಕುಟುಂಬಿಕರು ಬುಧವಾರ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಶ್ರೀಗಳ ದರ್ಶನ ಪಡೆದಿದ್ದರು. ಕುಟುಂಬವು ಗುರುವಾರ ಚಂಡಿಕಾ ಯಾಗ ನೆರವೇರಿಸಿ ಬೆಂಗಳೂರಿಗೆ ಹೊರಟಿತ್ತು. ಈ ಸಂದರ್ಭ ಹೆಲಿಕಾಪ್ಟರ್‌ನಲ್ಲಿ ಇಂಧನ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನ 1.20ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸುಮಾರು 45 ನಿಮಿಷ ತಂಗಿತ್ತು.

ಆ ವೇಳೆಗೆ ದೇವೇಗೌಡ, ಕುಮಾರಸ್ವಾಮಿ ಹಾಗೂ ಪುತ್ರ ನಿಖೀಲ್‌  ನಿಲ್ದಾಣದ ವಿಶ್ರಾಂತಿ ಕೋಣೆಗೆ ಆಗಮಿಸಿ ಅಲ್ಲಿ ಸ್ವಲ್ಪ ಹೊತ್ತು ಕಳೆದರು. ದೇವೇಗೌಡರ ಪತ್ನಿ ಚೆನ್ನಮ್ಮ, ಅನಿತಾ ಕುಮಾರಸ್ವಾಮಿ ಹೆಲಿಕಾಪ್ಟರ್‌ನಲ್ಲೇ ಕುಳಿತಿದ್ದರು. ಹೆಲಿಕಾಪ್ಟರ್‌ ಇಂಧನ ತುಂಬಿಸಿದ ಬಳಿಕ ಮಧ್ಯಾಹ್ನ 2ರ ಸುಮಾರಿಗೆ ಮತ್ತೆ ಬೆಂಗಳೂರಿಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ಖಾಲಿ ಹೆಲಿಕಾಪ್ಟರ್‌ ಬರುವುದು ಎಂದಿತ್ತು!
ಇಂಧನ ತುಂಬಿಸಲು ಖಾಲಿ ಹೆಲಿಕಾಪ್ಟರ್‌ ಆಗಮಿಸುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ದೇವೇಗೌಡ ಕುಟುಂಬ ಮಂಗಳೂರಿಗೆ ಬಂದು ಹೋದದ್ದು ವಿಶೇಷ. ಆದರೆ ಈ ಆಗಮನದ ಬಗ್ಗೆ ಜಿಲ್ಲಾ ಜೆಡಿಎಸ್‌ ನಾಯಕರಿಗೆ ಮಾಹಿತಿ ಇರಲಿಲ್ಲ.

ತಂದೆ-ಮಗನ ಮಾತುಕತೆ
ಇಂಧನ ತುಂಬಿಸುವ ವೇಳೆ ದೇವೇಗೌಡ, ಕುಮಾರಸ್ವಾಮಿ ಹಾಗೂ ಪುತ್ರ ನಿಖೀಲ್‌ ನಿಲ್ದಾಣದ ವಿಶ್ರಾಂತಿ ಕೋಣೆಯಲ್ಲಿದ್ದು, ಸುಮಾರು ಅರ್ಧ ತಾಸು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ, ಟಿಕೆಟ್‌ ಹಂಚಿಕೆಯ ಬಗ್ಗೆ ಮಹತ್ವದ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next