Advertisement

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

09:16 PM Jul 02, 2024 | Team Udayavani |

ಮೈಸೂರು: ಯಾವತ್ತೂ ಯಾವುದಕ್ಕೂ ನಾನು ಎದೆಗುಂದುವುದಿಲ್ಲ. 30 ವರ್ಷಗಳ ರಾಜಕಾರಣದಲ್ಲಿ ಇಂಥವನ್ನೆಲ್ಲ ಬಹಳ ನೋಡಿದ್ದೇನೆ. ಎಚ್‌.ಡಿ. ದೇವೇಗೌಡರು ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್‌ ಹಾಗೂ ಡಾ| ಸೂರಜ್‌ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿದ್ದು, ಇತ್ಯರ್ಥವಾದ ಬಳಿಕ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದರು.

ಸದ್ಯಕ್ಕೆ ಪ್ರಜ್ವಲ್‌ ಭೇಟಿಗೆ ಹೋಗುವುದಿಲ್ಲ, ಹೋದರೆ ರೇವಣ್ಣ ಏನೋ ಹೇಳಿಕೊಟ್ಟ ಎನ್ನುತ್ತಾರೆ. ಹೀಗಾಗಿ ಭೇಟಿಗೇ ಹೋಗುವುದಿಲ್ಲ. ಸೋಮವಾರ ರಾತ್ರಿ ನನ್ನ ಪತ್ನಿ (ಭವಾನಿ) ಭೇಟಿ ಮಾಡಿದ್ದು, ತಾಯಿ-ಮಗ ಏನು ಮಾತಾಡಿದ್ದಾರೆಂಬುದು ಗೊತ್ತಿಲ್ಲ, ಕೇಳಲೂ ಹೋಗಿಲ್ಲ. ಆದರೆ ಸೂರಜ್‌ ಮಹಾನ್‌ ದೈವ ಭಕ್ತನಾಗಿದ್ದು ಬಹಳ ಬೇಗ ಹೊರ ಬರುತ್ತಾನೆ ಅನ್ನುವ ನಂಬಿಕೆ ಇದೆ. ಸದ್ಯಕ್ಕೆ ನಮಗೆ ದೇವರು ಬಿಟ್ಟರೆ ಇನ್ಯಾರು? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next