Advertisement

HD Kumaraswamy “ಪತ್ರ ಬರೆದರೆ ಸಾಲದು, ಅಧಿಕಾರಿಯನ್ನು ಕಳುಹಿಸಿ ಮೊದಲು ಚರ್ಚೆ ನಡೆಸಲಿ’

11:38 PM May 22, 2024 | Team Udayavani |

ಮೈಸೂರು: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಸಂಬಂಧ ಕೇಂದ್ರ ಸರಕಾರ ನಮ್ಮೊಂದಿಗೆ ಸ್ಪಂದಿಸುತ್ತಿಲ್ಲ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಆರೋಪಿಸಿದ್ದಾರೆ.

Advertisement

ಆದರೆ ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದರೆ ಆಗೋದಿಲ್ಲ. ಕಾನೂನು ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಈ ಪ್ರಕರಣ ನಮಗೂ ಹೊಸದು. ಸರಕಾರ ಅಧಿಕಾರಿಯನ್ನು ಕೇಂದ್ರಕ್ಕೆ ಕಳುಹಿಸಿ ಚರ್ಚೆ ನಡೆಸುವ ಕೆಲಸ ಮಾಡ ಬೇಕು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್‌ ನನ್ನು ಯಾವ ರೀತಿ ಕರೆತರಬೇಕು, ಕಾನೂನಿನಲ್ಲಿ ಯಾವೆಲ್ಲ ಅವಕಾಶ ಇದೆ ಎಂಬುದನ್ನು ಮನಗಾಣಬೇಕು. ಅದನ್ನು ಬಿಟ್ಟು ಕೇವಲ ಪತ್ರ ಬರೆದು ಕುಳಿತರೆ ಆಗದು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next