ಇಲ್ಲ. ಆದರೂ ಕಣ್ಣೀರಿನ ವಿಚಾರವನ್ನು ವಿವಾದವಾಗಿ ಮಾಡಲಾಯಿತು.
Advertisement
ನನ್ನ ಕಣ್ಣೀರಿಗೆ ಬಣ್ಣವಿಲ್ಲಎಂದು ಸಿಎಂ ಕುಮಾರಸ್ವಾಮಿ ಬೇಸರಿಸಿದ್ದಾರೆ. “”ನಾನು ರಾಜ್ಯದ ಮುಖ್ಯಮಂತ್ರಿ ಎಂಬುದಕ್ಕಿಂತ ಒಬ್ಬ ಮನುಷ್ಯನಾಗಿ ಮೊದಲಿನಿಂದಲೂ ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಂಡವನು. ಕುಟುಂಬದ ಮಧ್ಯೆ ನೋವು ಹಂಚಿಕೊಂಡಿದ್ದೇನೆ. ಆದರೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಣ್ಣೀರು ಹಾಕಿದ್ದು ನೋಡಿದ್ದೀರಾ? ಮುಖ್ಯಮಂತ್ರಿ ಸ್ಥಾನದಲ್ಲಿರಬೇಕಾದರೆ ಅಷ್ಟೇ ಗಟ್ಟಿತನದ ಕಾರ್ಯಕ್ರಮಗಳನ್ನು ಕೊಡಲು ಪ್ರಯತ್ನಿಸಿದ್ದೇನೆ” ಎಂದರು.
ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಸುರಿಸಿದ್ದಾರೆ. ಆದರೆ, ಅವರು ವೀಕ್ ಅಲ್ಲ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾರೇ ಮುಖ್ಯಮಂತ್ರಿಯಾದರೂ ಸರಕಾರ ನಡೆಸುವುದು ಅಷ್ಟೊಂದು ಸುಲಭವಲ್ಲ. ಮುಖ್ಯಮಂತ್ರಿ ಹುದ್ದೆ ಇರುವುದು ಎಂಜಾಯ್ ಮಾಡುವುದಕ್ಕಲ್ಲ. ಸರಕಾರ ನಡೆಸುವುದು ಎಂದರೆ ಹೂವಿನ ಹಾಸಿಗೆಯಲ್ಲ ಎಂದರು.
Related Articles
● ಎಚ್.ಡಿ. ಕುಮಾರಸ್ವಾಮಿ, ಸಿಎಂ
Advertisement
ಕುಮಾರಸ್ವಾಮಿ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿರುವ ಭಾವನಾತ್ಮಕ ವಿಷಯದಲ್ಲಿ ರಾಜಕೀಯ ಹುಡುಕುವುದು ಬೇಡ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇದೆ.● ಶಿವಾನಂದ ಪಾಟೀಲ, ಸಚಿವ