Advertisement

karnataka polls: ಸರ್ಪ, ವಿಷ ಕನ್ಯೆ ಚರ್ಚೆ ಅಗತ್ಯ ಇಲ್ಲ:ಎಚ್‌.ಡಿ.ಕುಮಾರಸ್ವಾಮಿ

08:37 PM May 01, 2023 | Team Udayavani |

ಬಾದಾಮಿ: ಸರ್ಪ, ವಿಷಕನ್ಯೆ ಇಂದಿನ ರಾಜಕಾರಣದಲ್ಲಿ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಮೊದಲು ಅವುಗಳ ಬಗ್ಗೆ ಚರ್ಚೆಯಾಗಲಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ವಿಷಕನ್ಯೆ, ಸರ್ಪದ ಮಾತಿನಿಂದ ಜನರ ಬದುಕು ಸರಿ ಆಗಲ್ಲ. ಅಕಾಲಿಕ ಮಳೆಯಿಂದ ರೈತರ ಬೆಳೆ ನಾಶವಾಗಿದೆ. ಈ ಬಗ್ಗೆ ಚರ್ಚೆಯಾಗಬೇಕು. ಸರ್ಪ ಯಾವತ್ತಿದ್ದರೂ ಅಪಾಯವೇ. ಹೀಗಾಗಿ ಮೋದಿ ಸರ್ಪ ಆಗುವುದು ಬೇಡ. ಮೋದಿ ಭಾಷಣ ಎಲ್ಲ ಸಂತೆ ಭಾಷಣ. ಯಾವುದೂ ಅನುಷ್ಠಾನಕ್ಕೆ ಆಗಲ್ಲ. ಬರೀ ಬುರುಡೆ ಭಾಷಣ ಮಾಡಿ ಹೋಗುತ್ತಾರೆ ಎಂದರು.

ಡಬಲ್‌ ಇಂಜಿನ್‌ ಸರ್ಕಾರವೇ ಲೂಟಿ ಹೊಡೆಯೋದು. ವರುಣಾದಲ್ಲಿ ನಾನು ಚುನಾವಣೆ ನಡೆಸುತ್ತಿರೋದು ನಮ್ಮ ಅಭ್ಯರ್ಥಿ ಗೆಲುವಿಗಾಗಿ. ಇನ್ನೊಬ್ಬರನ್ನು ಸೋಲಿಸಬೇಕು ಎಂದು ಅಲ್ಲ. ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡಲ್ಲ ಎಂದರು. ರಾಜ್ಯ ಮತ್ತು ಕೇಂದ್ರದಲ್ಲಿ ಲೂಟಿ ಹೊಡೆದಿರುವುದೇ ಬಿಜೆಪಿ ಸಾಧನೆ. ಆದರೂ ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next