Advertisement

ಶೃಂಗೇರಿಗೆ ತೆರಳಿದ ದೇವೇಗೌಡ ದಂಪತಿ

11:28 PM May 15, 2019 | Sriram |

ಕಾಪು: ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬುಧವಾರ ರಸ್ತೆ ಮಾರ್ಗವಾಗಿ ಶೃಂಗೇರಿಗೆ ತೆರಳಿದ್ದಾರೆ.

Advertisement

ಗುರುವಾರ ಬೆಳಗ್ಗೆ ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಅವರು ಬಳಿಕ ಮಠಾಧಿಪತಿಗಳ ದರ್ಶನ ಪಡೆಯಲಿರುವರು. ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನಗೈದು ಧರ್ಮಾಧಿಕಾರಿ ಡಾಣ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿದ್ದಾರೆ.

ಅಂಬಲಪಾಡಿಗೆ ಭೇಟಿ
ಶೃಂಗೇರಿಗೆ ತೆರಳುವ ಮುನ್ನ ದೇವೇಗೌಡ ದಂಪತಿ ಬುಧವಾರ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇಗುಲದ ಧರ್ಮದರ್ಶಿ ಡಾಣ ನಿ.ಬೀ. ವಿಜಯ ಬಲ್ಲಾಳ್‌ ಗೌಡರನ್ನು ಸ್ವಾಗತಿಸಿ, ಪ್ರಸಾದ ನೀಡಿದರು.

ಮೇ 24ರಂದು ಸರ್ವಪೂಜೆ
ದೇಗುಲದಲ್ಲಿ ನಡೆಯುವ ಪೂಜೆ, ಭಕ್ತರು ಕೊಡುವ ಸೇವೆಗಳ ಬಗ್ಗೆ ಮಾಹಿತಿ ಪಡೆದ ಗೌಡರು ಮೇ 24ಕ್ಕೆ ಎಚ್‌.ಡಿ. ದೇವೇಗೌಡ   ಚೆನ್ನಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಸರ್ವಪೂಜೆ ನಡೆಸುವಂತೆ 250 ರೂ. ನೀಡಿ ರಶೀದಿ ಪಡೆದುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next