Advertisement

ಕೇರಳ ನರಬಲಿ: ಆರೋಪಿ ಜಾಮೀನು ಅರ್ಜಿ ವಜಾ

07:20 PM Jan 04, 2023 | Team Udayavani |

ತಿರುವನಂತಪುರ: ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳ ನರಬಲಿ ಪ್ರಕರಣದ ಆರೋಪಿ, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

Advertisement

ಮಾಟ-ಮಂತ್ರದ ಉದ್ದೇಶಕ್ಕಾಗಿ ರೋಸ್ಲಿನ್‌ ಮತ್ತು ಪದ್ಮಾ ಎನ್ನುವ ಇಬ್ಬರು ಮಹಿಳೆಯರನ್ನು ಅಮಾನುಷ ರೀತಿಯಲ್ಲಿ ಬಲಿ ನೀಡಿದ್ದ ಪ್ರಕರಣದ ಪ್ರಮುಖ ಆರೋಪಿ, ಲೈಲಾ ಭಗವಾಲ್‌ ಸಿಂಗ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬೆಚು ಕುರಿಯನ್‌ ಥಾಮಸ್‌ ತಿರಸ್ಕರಿಸಿದ್ದಾರೆ.

ಪ್ರಮುಖ ಆರೋಪಿಯಾದ ಲೈಲಾ ಜತೆಗೆ ಆಕೆಯ ಪತಿ ಭಗ್ವಾಲ್‌ ಸಿಂಗ್‌ ಹಾಗೂ ಮೊಹಮ್ಮದ್‌ ಶಫಿ ಎಂಬಾತ ಸೇರಿ ಮಹಿಳೆಯರನ್ನು ನರಬಲಿ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next