Advertisement

Haveri: ಜಮೀನಿನಲ್ಲಿ ವಿದ್ಯುತ್ ತಗುಲಿ ಅಪ್ಪ-ಮಗ ಸಾವು

02:33 PM Aug 07, 2024 | Team Udayavani |

ಹಾವೇರಿ: ಜಮೀನಿನಲ್ಲಿ ಪಂಪ್‌ ಸೆಟ್ ದುರಸ್ತಿ ಮಾಡತ್ತಿದ್ದಾಗ ವಿದ್ಯುತ್ ತಗುಲಿ ಅಪ್ಪ-ಮಗ ಮೃತಪಟ್ಟ ಘಟನೆ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ಆ.7ರ ಬುಧವಾರ ನಡೆದಿದೆ.

Advertisement

ಗ್ರಾಮದ ರೈತ ಕರಬಸಪ್ಪ‌ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ ಕಡೇನಾಯಕನಹಳ್ಳಿ(26) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಇವರಿಬ್ಬರು ಗ್ರಾಮದ ಹೊರಭಾಗದಲ್ಲಿದ್ದ ಜಮೀನಿನಲ್ಲಿ ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ್ ಸ್ಟಾರ್ಟ್ ಮಾಡಲು ತೆರಳಿದ್ದು, ಈ ಸಂದರ್ಭ ವಿದ್ಯುತ್ ಆಕಸ್ಮಿಕವಾಗಿ ತಗುಲಿ ಸಾವನ್ನಪ್ಪಿದ್ದಾರೆ. ‌

ರಾಣಿಬೆನ್ನೂರ ತಾಲೂಕಿನ ಹಲಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next