Advertisement

ಕೆಸರುಗದ್ದೆಯಂತಾದ ಹಾವನೂರ ರಸ್ತೆ

12:25 PM Jul 27, 2022 | Team Udayavani |

ಅಫಜಲಪುರ: ತಾಲೂಕಿನ ಹಾವನೂರು ಗ್ರಾಮದ ಜೈ ಭೀಮ್‌ ನಗರದ ಹತ್ತಿರ ಇರುವ ಹಾವನೂರ-ಗರೂರ್‌ ಮುಖ್ಯರಸ್ತೆ ಜಿಟಿಜಿಟಿ ಸುರಿದ ಮಳೆಯಿಂದ ಕೆಸರುಗದ್ದೆಯಂತಾಗಿ ಸಾರ್ವಜನಿಕರು, ವಾಹನ ಚಾಲಕರು ಪರದಾಡುವಂತಾಗಿದೆ ಎಂದು ಡಾಕ್ಟರ್‌ ಬಾಬಾ ಸಾಹೇಬ್‌ ಅಂಬೇಡ್ಕರ್‌ ತರುಣ ಸಂಘದ ಅಧ್ಯಕ್ಷ ನಿಂಗಪ್ಪ ಸಿಂಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಹಾವನೂರು ಗ್ರಾಮದ ಜೈ ಭೀಮ್‌ ನಗರಕ್ಕೆ ಹೋಗಬೇಕಾದರೆ ನೀವು ಸರ್ಕಸ್‌ ಮಾಡಿಕೊಂಡು ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ನೀವು ಕೆಸರುಗದ್ದೆಯಲ್ಲಿ ಬೀಳುವುದಂತೂ ನಿಶ್ಚಿತ. ಈ ಕುರಿತು ಸಾಕಷ್ಟು ಬಾರಿ ಶಾಸಕರಿಗೆ, ಗ್ರಾಮ ಪಂಚಾಯಿತಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ನಿಂಗಪ್ಪ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಟಿಜಿಟಿ ಮಳೆಯಲ್ಲಿ ಈ ರಸ್ತೆ ಮೂಲಕವೇ ಗ್ರಾಮಕ್ಕೆ ಹೋಗಬೇಕು. ಗರೂರು ಬಿದನೂರು-ಗ್ರಾಮಕ್ಕೆ ಹೋಗುವವರು ಈ ರಸ್ತೆಯಲ್ಲಿ ಹೈರಾಣಾಗುತ್ತಿದ್ದಾರೆ. ಬೈಕ್‌ ಮೇಲೆ ಹೋಗುವವರು ಈ ರಸ್ತೆಯಲ್ಲಿ ಬಿದ್ದು ಮೈಯೆಲ್ಲ ಕೆಸರು ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಎರಡು ನೂರು ಮೀಟರ್‌ ರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡಿ ಜೈಭೀಮ ನಗರದ ವಾಸಿಗಳಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ. ವಾರದಲ್ಲಿ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next