Advertisement

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

01:08 AM Dec 02, 2021 | Team Udayavani |

ಮಂಗಳೂರು: ಬೀದಿ ನಾಯಿಗಳಿಗೆ ಪ್ರತೀ ದಿನ ಆಹಾರ ನೀಡುವ, ಆಪತ್ತಿಗೊಳಗಾದ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಮಂಗಳೂರಿನ ರಜನಿ ಅವರ ಸೇವೆಯನ್ನು ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಅವರು ಪ್ರಸಂಶಿಸಿದ್ದಾರೆ.

Advertisement

ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ರಜನಿ ಅವರ ಫೋಟೊ ಸಹಿತ ಪೋಸ್ಟ್‌ ಮಾಡಿರುವ ಲಕ್ಷ್ಮಣ್‌ ಅವರು, “ಮಂಗಳೂರಿನ ರಜನಿ ಅವರು ನೂರಾರು ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.

ಪ್ರಾಣಿಗಳು ಒಂದು ವೇಳೆ ಆಪತ್ತಿಗೆ ಒಳಗಾದರೆ ಅವುಗಳ ರಕ್ಷಣೆಗೂ ಅವರು ಧಾವಿಸುತ್ತಾರೆ.

ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಪ್ರಾಣಿಗಳು ಒಂದೊಮ್ಮೆ ಬಾವಿಗೆ ಬಿದ್ದರೆ ಬಾವಿಗಳಿದು ಪ್ರಾಣಿಗಳ ರಕ್ಷಣೆ ಮಾಡುತ್ತಿದ್ದಾರೆ. ಅವರ ಸೇವೆಗೆ ಭೇಷ್‌ ಎನ್ನಲೇಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next