Advertisement

Hubli; ಕೋವಿಡ್‌ ತನಿಖೆ ಸಮಿತಿ ಮೂಲಕ ಸಿಎಂರಿಂದ ದ್ವೇಷ ರಾಜಕೀಯ: ಮಹೇಶ ಟೆಂಗಿನಕಾಯಿ

02:21 PM Sep 06, 2024 | Team Udayavani |

ಹುಬ್ಬಳ್ಳಿ: ಕೋವಿಡ್ ಹಗರಣದ ಕುರಿತಾಗಿ ಏಕಾಏಕಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸುವ ಮೂಲಕ ಮುಖ್ಯಮಂತ್ರಿಯವರು ದ್ವೇಷದ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.

Advertisement

ಶುಕ್ರವಾರ ಇಲ್ಲಿನ ಈದ್ಗಾ‌ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಯ ಹಾಲಗಂಬ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ, ಮುಡಾ ಹಗರಣದಲ್ಲಿ ಸಿಲುಕಿರುವ ಸರ್ಕಾರ, ತನಿಖೆ ದಾರಿ ತಪ್ಪಿಸಲು ಇಂತಹ‌ ಕೆಲಸಗಳಿಗೆ ಮುಂದಾಗಿದೆ. ಯಾವುದೇ ತನಿಖೆಗೂ ಬಿಜೆಪಿ ಸಿದ್ದವಿದೆ. ಸರ್ಕಾರದ ಬೆದರಿಕೆ ತಂತ್ರಗಳಿಗೆ ಜಗ್ಗುವುದಿಲ್ಲ. ಮುಡಾ ಹಗರಣದಲ್ಲಿ ಆರೋಪ ಬಂದ ಕೂಡಲೇ ಸಿಎಂ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ರಾಜ್ಯ‌ ಕಾಂಗ್ರೆಸ್ ಸರ್ಕಾರ ಒಂದು‌ ಮನೆ ಮೂರು ಬಾಗಿಲು ಎನ್ನುವಂತಾಗಿದೆ ಎಂದರು.

ಮಹದಾಯಿ‌ ವಿಚಾರದಲ್ಲಿ ರಾಜ್ಯದ ಪರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ‌ ಅವರು ಶಕ್ತಿ ಮೀರಿ‌ ಯತ್ನಿಸುತ್ತಿದ್ದಾರೆ. ಈ ಹಿಂದೆ ಸೋನಿಯಾ ಗಾಂಧಿ‌ ಅವರು ಕರ್ನಾಟಕಕ್ಕೆ ಮಹದಾಯಿಯ ಹನಿ ನೀರು ನೀಡುವುದಿಲ್ಲ ಎಂದು ಗೋವಾದಲ್ಲಿ ಹೇಳಿದ್ದನ್ನು  ಮರೆಯಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next