Advertisement

ಹಾಸನ: ಶ್ರೀ ಹಾಸನಾಂಬಾ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅ.13 ರಿಂದ 26ರ ವರೆಗೆ ನಡೆಯಲಿದೆ.

Advertisement

ದೇವರ ವಿಶೇಷ ಮತ್ತು ಶೀಘ್ರ ದರ್ಶನಕ್ಕೆ 1,000 ರೂ. ಹಾಗೂ 300 ರೂ. ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರಗಿದ ಶ್ರೀ ಜಾತ್ರಾ ಮಹೋತ್ಸವದ ಸಿದ್ಧತೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಜಿಲ್ಲಾಧಿಕಾರಿ ಅರ್ಚನಾ, ಹಾಸನಾಂಬೆ ದೇಗುಲದ ಹತ್ತಿರ, ಕೇಂದ್ರಿಯ ಬಸ್‌ ನಿಲ್ದಾಣ ಹಾಗೂ ನಗರ ಸಾರಿಗೆ ಬಸ್‌ ನಿಲ್ದಾಣ, ರೈಲು ನಿಲ್ದಾಣ ಮತ್ತು ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ಟಿಕೆಟ್‌ ಕೌಂಟರ್‌ ತೆರೆಯುವಂತೆ ಸೂಚಿಸಿದರು. ಎಸ್‌ಪಿ ಹರಿರಾಂ ಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next