Advertisement

ಸ್ವಾಮೀಜಿಗಳು ಬಹಿರಂಗ ಹೇಳಿಕೆ ನಿಲ್ಲಿಸಲಿ

07:35 PM Jul 24, 2021 | Team Udayavani |

ಹಾಸನ: ಬಿ.ಎಸ್‌.ಯಡಿಯೂರಪ್ಪಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿಮುಂದುವರಿಸುವಂತೆ ವಿವಿಧ ಮಠಗಳಸ್ವಾಮೀಜಿಗಳು ಬಹಿರಂಗ ಹೇಳಿಕೆ ನಿಲ್ಲಿಸದಿದ್ದರೆ ದಲಿತ ಸಂಘಟನೆಗಳ ಒಕ್ಕೂಟವು ಸ್ವಾಮೀಜಿಯವರ ವಿರುದ್ಧಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಒಕ್ಕೂಟದ ಜಿಲ್ಲಾ ಸಂಚಾಲಕಕೃಷ್ಣದಾಸ್‌ ಎಚ್ಚರಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ರಾಜ್ಯದ ರಾಜಕೀಯ ವಿದ್ಯಮಾನಗಳು ಜನಸಾಮಾನ್ಯರಲ್ಲಿ ಹೇಸಿಗೆಹುಟ್ಟಿಸುತ್ತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಆಪರೇಷನ್‌ಕಮಲದ ಮೂಲಕ ಮುಖ್ಯಮಂತ್ರಿಹುದ್ದೆಗೇರಿದವರು. ಈ ಕೃತ್ಯಗಳಿಗೆಬೆನ್ನೆಲುಬಾಗಿ ನಿಂತಿದ್ದು, ಬಿಜೆಪಿ ಪಕ್ಷ.ಇಂತಹ ಕೆಟ್ಟ ಪರಂಪರೆಯನ್ನು ಹುಟ್ಟುಹಾಕಿದ ಯಡಿಯೂರಪ್ಪ ಅವರಿಗೆ ಈಗಜಾತಿ ಪೋಷಾಕು ಧರಿಸಿರುವ ಮಠಾಧಿಪತಿಗಳು ಅವರನ್ನೇ ಮುಖ್ಯಮಂತ್ರಿಹುದ್ದೆಯಲ್ಲಿ ಮುಂದುವರಿಸುವಂತೆಆಗ್ರಹಿಸಿ ಬಹಿರಂಗವಾಗಿ ಬೀದಿಗಿಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದುಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜನರು ಕೊರೊನಾ ಮತ್ತುಲಾಕ್‌ಡೌನ್‌ನಿಂದನಿಂದ ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿಗ್ಯಾಸ್‌ ಸೇರಿದಂತೆ ಅಗತ್ಯ ವಸ್ತುಗಳಬೆಲೆಗಳು ಗಗನಕ್ಕೇರಿವೆ.ಲಕ್ಷಾಂತರ ಮಂದಿನಿರುದ್ಯೋಗಿ ಗಳಾಗಿದ್ದಾರೆ. ಜನಸಾಮಾನ್ಯರ ಈ ಯಾವುದೇ ಸಮಸ್ಯೆಗಳಿಗೆಧ್ವನಿಯಾಗದ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ಮುಂದುವರಿಸಬೇಕೆಂದು ಒತ್ತಾಯಮಾಡುತ್ತಿರುವುದು ನೈತಿಕ ಮೌಲ್ಯಗಳ ಅಧಃಪತನದಧೊÂàತಕಎಂದರು.

ದಸಂಸಮುಖಂಡರಾದ ಅಂಬುಗ ಮಲ್ಲೇಶ್‌,ನಾಗರಾಜ್‌ ಹೆತ್ತೂರ್‌, ಆರ್‌ಪಿಐ ಸತೀಶ್‌,ಆರ್‌. ಮರಿಜೋಸೆಫ್ ಮತ್ತಿತರರುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next