Advertisement

24 ರಿಂದ ಅರೇಮಾದನಹಳ್ಳಿ ಶ್ರೀಗಳ ಚಾತುರ್ಮಾಸ್ಯ

07:21 PM Jul 22, 2021 | Team Udayavani |

ಹಾಸನ: ಅರಕಲಗೂಡು ತಾಲೂಕು ಅರೇಮಾದನಹಳ್ಳಿಯ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನಮಠದ18 ನೇಪೀಠಾಧಿಪತಿ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು ಜು.24ರಿಂದ ಸೆ.20 ರವರೆಗೆ 39ನೇ ಚಾತುರ್ಮಾಸ್ಯವ್ರತಾನುಷ್ಠಾನದಲ್ಲಿ ಪಾಲ್ಗೊಳ್ಳುವರು.

Advertisement

24 ರಂದು ಧ್ವಜಾರೋಹಣದೊಂದಿಗೆ ಪೂಜಾಕೈಂಕರ್ಯಗಳು ನಡೆಯಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಧಾನಪರಿಷತ್‌ ಸದಸ್ಯ ರಘುಆಚಾರ್‌, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್‌, ನಿವೃತ್ತ ಮುಜರಾಯಿಕಮಿಷನರ್‌ ಬೆಂಗಳೂರಿನ ಕೆ.ಎಸ್‌.ಪ್ರಭಾಕರ್‌, ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಪೊರೇಷನ್‌ನ ಎಂ.ಡಿ.ವೇದಮೂರ್ತಿ, ಹಾಸನ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಸ್‌.ಸಿ.ಮಹೇಶ್‌, ಬ್ರಹ್ಮಾವರದಸಂತೋಷ್‌ ಹೆಗಡೆ ಹಾಗೂ ಅಲೆಯೂರು ಯೋಗಿಶಾಚಾರ್ಯರು, ಮೂಡಬಿದ್ರೆಯ ಸಮೂಹ ಉದ್ಯಮಿರಾಮಕೃಷ್ಣಾಚಾರ್ಯ, ಉದ್ಯಮಿಗಳಾದ ವಿಠಲ್‌ಬೆಳಂದೂರ್‌ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಉದ್ಯಮಿಗಳು, ಸಮುದಾಯದ ನಿವೃತ್ತ ಅಧಿಕಾರಿಗಳು, ದಾನಿಗಳು ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next