Advertisement

ಭಾರೀ ಮಳೆ, ಅಲ್ಲಲ್ಲಿ ಭೂ ಕುಸಿತ, ಮರಗಳು ಧರೆಗೆ

08:47 PM Jul 16, 2021 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದವ್ಯಾಪಕ ಮಳೆ ಸುರಿಯುತ್ತಿದ್ದು, ವಿವಿಧೆಡೆ ಭೂಕುಸಿತ,ಮರಗಳು ಧರೆಗುಳಿವೆ.ತಾಲೂಕಿನ ಯಸಳೂರು, ಹೆತ್ತೂರು, ಹಾನುಬಾಳ್‌,ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಮುಂಗಾರುಮಳೆ ಆರ್ಭಟಿಸಿದ್ದು, ಬೆಳಗೋಡು ಹೋಬಳಿಯಲ್ಲಿ ಸಹಮಳೆ ಮುಂದುವರಿದಿದೆ.

Advertisement

ಸತತವಾಗಿ ಮಳೆಸುರಿಯುತ್ತಿರುವುದರಿಂದಜನಜೀವನಅಸ್ತವಸೆöಗೊಂಡಿದ್ದು,ಹಲವೆಡೆ ಮರಗಳು ವಿದ್ಯುತ್‌ ತಂತಿಗಳ ಮೇಲೆಬಿದ್ದು ಹಲವು ಗ್ರಾಮಗಳಲ್ಲಿ ವಿದ್ಯುತ್‌ಸ್ಥಗಿತಗೊಂಡಿದೆ.ತಪ್ಪಿದ ಹೆಚ್ಚಿನ ಅಪಾಯ: ಬಿಸ್ಲೆಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಚೌಡಮ್ಮ ದೇವಸ್ಥಾನದಒಂದು ಕಿ.ಮೀ.ಹಿಂದೆ ರಸ್ತೆಗೆಅಡ್ಡವಾಗಿ ಮರವೊಂದುಬಿದ್ದಿದ್ದರಿಂದ ವಾಹನಗಳಸಂಚಾರಕ್ಕೆಅಡ್ಡಿಯುಂಟಾಗಿತ್ತು.ಮರ ಬಿದ್ದ ಸಮಯದಲ್ಲಿ ಯಾವುದೇ ವಾಹನಗಳು ಬರದಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.ನಂತರ ವನಗೂರು ಗ್ರಾಪಂ ಅಧ್ಯಕ್ಷ ಆನಂದ್‌ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಮರವನ್ನುತೆರವುಗೊಳಿಸಲಾಯಿತು.

ಮನೆ ಕುಸಿಯುವ ಸಾಧ್ಯತೆ: ಹೆತ್ತೂರು-ಬಾಚ್ಚಿಹಳ್ಳಿ ಮುಖ್ಯರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಕೆಲ ಕಾಲತೊಂದರೆಯಾಗಿತ್ತು. ಆನೆಮಹಲ್‌ಗ್ರಾಪಂ ಆನೆಮಹಲ್‌ ಗ್ರಾಮದಅಡ್ಡನಗುಡ್ಡೆ ಯಲ್ಲಿ ರಾಷ್ಟ್ರೀಯ ಹೆದ್ದಾರಿಯವರು ರಸ್ತೆಅಗಲಿಕರಣಕ್ಕಾಗಿ ರಸ್ತೆಯ ವಿವಿಧೆಡೆಯಂತ್ರಗಳನ್ನು ಬಳಸಿ ಕೊರೆದಿರುವಕಾರಣದಿಂದ ಸುರಿದ ಮಳೆಗೆ ಗೆರೆಕುಸಿದಿದ್ದು, ಈ ಗೆರೆಯ ಮೇಲ್ಭಾಗ ಸುಮಾರು15 ಮನೆಗಳಿದ್ದು, ಯಾವುದೆ ಸಂದರ್ಭದಲ್ಲಿಕುಸಿಯುವ ಸಾಧ್ಯತೆ ಇದೆ. ಕಳೆದ ಬಾರಿ ಇವರೆಲ್ಲರನ್ನೂ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಬಾರಿಯೂ ತುಂಬಾಮಳೆಯಾಗುವ ನಿರೀಕ್ಷೆ ಇದ್ದು, ಜಿÇÉಾಡಳಿತ ಸೂಕ್ತ ಕ್ರಮವಹಿಸಬೇಕೆಂದು ಗ್ರಾಪಂ ಸದಸ್ಯ ಹಸೈನಾರ್‌ ಒತ್ತಾಯಿಸಿದ್ದಾರೆ.

 ಮನೆಯ ಕೆಲವು ಭಾಗ ಶಿಥಿಲ: ಅಡ್ಡನಗುಡ್ಡೆಅಂಗನವಾಡಿಯ ಹಿಂಭಾಗ ಸುರಿದ ಭಾರೀ ಮಳೆಗೆ ಗೆರೆಕುಸಿದಿದ್ದು, ಅಂಗನವಾಡಿ ಕಟ್ಟಡ ಕುಸಿದು ಬೀಳುವಹಂತದಲ್ಲಿದೆ. ಅಡ್ಡನಗುಡ್ಡೆ ಸುಲೈಮಾನ್‌ ಎಂಬುವರಮನೆಯ ಹಿಂಭಾಗ ರಾತ್ರಿ ಭಾರೀ ಮಳೆಗೆ ಗೆರೆ ಕುಸಿದಿದ್ದು,ಮನೆಯ ಒಳಗೆ ಮಣ್ಣು ನುಗ್ಗಿ ಮನೆಯ ಕೆಲವು ಭಾಗಶಿಥಿಲಗೊಂಡಿರುತ್ತದೆ.ಯಸಳೂರು ಹಾಗೂ ಹೆತ್ತೂರುಹೋಬಳಿಯಉಚ್ಚಂಗಿ,ಆನೆಗುಂಡಿ, ಕುರಕಮನೆ, ಎಡೆಕುಮರಿ, ಬಿಸ್ಲೆ,ಹಡ್ಲುಗ¨ªೆ,ನೇರಡಿ, ಹುಲುಗತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿಬಿಡುವು ಕೊಟ್ಟು ಮಳೆ ಸುರಿಯಿತು. ಒಟ್ಟಾರೆಯಾಗಿತಾಲೂಕಿನಾದ್ಯಂತ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು,ಮಲೆನಾಡಿನ ಸಹಜ ವಾತಾವರಣ ಹಿಂದಿರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next