Advertisement

ಹಾಸನ : ಹಾಡಹಗಲೇ ಒಂಟಿ‌ ಮಹಿಳೆಯ ಬರ್ಬರ ಹತ್ಯೆಗೈದು ನಗ ನಗದು ದೋಚಿದ ದುಷ್ಕರ್ಮಿಗಳು

05:27 PM Jul 29, 2022 | Team Udayavani |

ಹಾಸನ : ಹಾಡಹಗಲೇ ಒಂಟಿ‌ ಮಹಿಳೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿ ನಗ ನಗದು ದೋಚಿದ ಘಟನೆ ಹಾಸನ ನಗರದ ಲಕ್ಷ್ಮಿಪುರಂ ಬಡಾವಣೆಯಲ್ಲಿ ನಡೆದಿದೆ.

Advertisement

ಲಕ್ಷ್ಮಿಪುರಂ ಬಡಾವಣೆಯ ಮಂಜುಳಾ (42) ಹತ್ಯೆಗೀಡಾದ ಮಹಿಳೆ.

ಘಟನೆ ವಿವರ : ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ್ದಾರೆ ಈ ವೇಳೆ ಮಹಿಳೆಯನ್ನು ಬೆದರಿಸಿ ಲಾಕರ್ ಕೀ ಪಡೆದು ನಗ ನಗದು ದೋಚಿ ಬಳಿಕ ಕತ್ತಿಯಿಂದ ಮಹಿಳೆಯ ಕತ್ತು ಕೊಯ್ದು ಪರಾರಿಯಾಗಿದ್ದಾರೆ.

ಮಂಜುಳಾ ಅವರ ಪತಿ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದು, ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಬಂದಾಗ ಪತ್ನಿ ಕೊಲೆಯಾಗಿರುವುದು ಬಯಲಾಗಿದೆ.

ಹಾಸನ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ಪರಿಶೀಲನೆ.

Advertisement

ಇದನ್ನೂ ಓದಿ : ಬಯಲು ಶೌಚ ಪ್ರಿಯರಿಗೆ ಸನ್ಮಾನ! :ಚೊಂಬು ಹಿಡಿದು ಹೊರಟವರಿಗೆ ಗುಲಾಬಿ ಹೂ

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next