Advertisement

ಹಾಸನ-ಮಂಗಳೂರು ರೈಲು ಮಾರ್ಗ: ಅತ್ಯಾಧುನಿಕ ಸಿಗ್ನಲ್‌ ಕಾರ್ಯಾರಂಭ

10:28 AM Oct 05, 2020 | sudhir |

ಮಂಗಳೂರು: ಮಂಗಳೂರು – ಹಾಸನ ರೈಲು ಮಾರ್ಗದ ಎಡಕುಮೇರಿ ಹಾಗೂ ಕಡಗರವಳ್ಳಿ ನಿಲ್ದಾಣ ಮಧ್ಯೆ ಕೈಗೊಂಡಿದ್ದ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಸಿಗ್ನಲ್‌ ವ್ಯವಸ್ಥೆ ಅಳವಡಿಕೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಿಸಿದೆ. ಹಾಸನ-ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮ (ಎಚ್‌ಎಂಆರ್‌ಡಿಸಿ) ಇದರ 4.4 ಕೋ.ರೂ. ವೆಚ್ಚವನ್ನು ಭರಿಸಿದೆ.
ಸಿಗ್ನಲ್‌ ವ್ಯವಸ್ಥೆ ಉನ್ನತೀಕರಣದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯ  ಶೇ. 35ರಷ್ಟು ವೃದ್ಧಿಯಾಗಿದ್ದು, ಹೆಚ್ಚು
ಪ್ರಯಾಣಿಕರ ಹಾಗೂ ಸರಕು ಸಾಗಾಟ ರೈಲುಗಳ ಸಂಚಾರ ಸಾಧ್ಯವಾಗಲಿದೆ.

Advertisement

ಕಡಗರವಳ್ಳಿ ಹಾಗೂ ಎಡಕುಮೇರಿ ನಿಲ್ದಾಣಗಳಲ್ಲಿ ರೈಲುಗಳ ಕ್ರಾಸಿಂಗ್‌ ಸೌಲಭ್ಯಗಳು ಲಭ್ಯವಾಗಲಿದ್ದು ರೈಲುಗಳ ಸಂಚಾರ ಸಂಖ್ಯೆ ಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ 24 ತಾಸುಗಳಲ್ಲಿ ರೈಲುಗಳ ಸಂಚಾರ ಸಾಮರ್ಥ್ಯ 20ಕ್ಕೇರಲಿದೆ. ಪ್ರಸ್ತುತ 13 ರೈಲುಗಳು ಸಂಚರಿಸುತ್ತಿವೆ.

ಇದನ್ನೂ ಓದಿ :ಮುನ್ನೆಚ್ಚರಿಕೆಯೊಂದಿಗೆ ಮಂಗಳೂರು ದಸರಾ : ಈ ಬಾರಿ ದಸರಾ ಮೆರವಣಿಗೆ ಇಲ್ಲ

ಬೆಂಗಳೂರು- ಮಂಗಳೂರು ಸೆಂಟ್ರಲ್‌ ವಿಶೇಷ ರೈಲು ರದ್ದು
ಮಂಗಳೂರು: ವಾರದಲ್ಲಿ ನಾಲ್ಕು ದಿನ ಕುಣಿಗಲ್‌ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆಂಗಳೂರು- ಮಂಗಳೂರು ಸೆಂಟ್ರಲ್‌- ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು (06515/ 16) ತಾತ್ಕಾಲಿಕವಾಗಿ ರದ್ದು ಪಡಿಸುವುದಾಗಿ ನೈಋತ್ಯ ರೈಲ್ವೇ ಪ್ರಕಟನೆ ತಿಳಿಸಿದೆ.

ಪ್ರಯಾಣಿಕರ ತೀವ್ರ ಕೊರತೆಯಿಂದ ಈ ಕ್ರಮ ಕೈಗೊಂಡಿದ್ದು, ಹೊಸ ಅಧಿಸೂಚನೆ ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಅ. 7ರಿಂದ ಮತ್ತು ಮಂಗಳೂರು- ಬೆಂಗಳೂರು ಮಾರ್ಗದಲ್ಲಿ ಅ. 11ರಿಂದ ಜಾರಿಯಾಗಲಿದೆ. ವಾರದಲ್ಲಿ ಮೂರು ದಿನ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಬೆಂಗಳೂರು- ಮಂಗಳೂರು ಸೆಂಟ್ರಲ್‌- ಬೆಂಗಳೂರು ಸ್ಪೆಷಲ್‌ ಎಕ್ಸ್‌ಪ್ರೆಸ್‌ (06517/18) ಹಾಗೂ ಬೆಂಗಳೂರು-ಮಂಗಳೂರು - ಕಾರವಾರ -ಬೆಂಗಳೂರು ರೈಲು ಸಂಚಾರವೂ ಯಥಾಸ್ಥಿತಿಯಲ್ಲಿರುತ್ತದೆ.

Advertisement

ಇದನ್ನೂ ಓದಿ :14.94 ಲಕ್ಷ ರೂ. ಮೌಲ್ಯದ ಸಿಂಥೆಟಿಕ್‌ ಡ್ರಗ್‌ ವಶ : ಮಣಿಪಾಲದ ವಿದ್ಯಾರ್ಥಿ ಬಂಧನ

ವೇಳಾಪಟ್ಟಿ ಬದಲು
ರೈಲು ಸಂ. 06517 ಬೆಂಗಳೂರು-ಮಂಗಳೂರು ರೈಲು ರವಿವಾರ, ಸೋಮವಾರ, ಮಂಗಳವಾರದ ಬದಲು ಅ. 7ರಿಂದ ಬುಧವಾರ, ಶುಕ್ರವಾರ, ರವಿವಾರ‌ ಸಂಚರಿಸಲಿದೆ. ರೈಲು ಸಂ. 06518 ಮಂಗಳೂರು- ಬೆಂಗಳೂರು ರೈಲು ಗುರುವಾರ, ಶುಕ್ರವಾರ, ಶನಿವಾರದ ಬದಲು ಅ. 8ರಿಂದ ಗುರುವಾರ, ಶನಿವಾರ, ಸೋಮವಾರಗಳಂದು ಸಂಚರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next