Advertisement

ಮೋಸ್ಟ್ ವಾಂಟೆಡ್ ಕ್ರಿಮಿನಲ್ ಲಾಕಪ್ ನಿಂದ ಸಿನಿಮೀಯ ರೀತಿ ಎಸ್ಕೇಪ್!

09:43 AM Sep 07, 2019 | Nagendra Trasi |

ಅಲ್ವಾರ್(ರಾಜಸ್ಥಾನ್):ಬಾಲಿವುಡ್ ಥ್ರಿಲ್ಲರ್ ಸಿನಿಮಾದ ಮಾದರಿಯಲ್ಲಿಯೇ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳು ಜೈಲಿನಿಂದ ಪರಾರಿಯಾದ ಘಟನೆ ರಾಜಸ್ಥಾನದಲ್ಲಿ ಶುಕ್ರವಾರ ನಡೆದಿದೆ.

Advertisement

ದೆಹಲಿಯಿಂದ 166 ಕಿಲೋ ಮೀಟರ್ ದೂರದಲ್ಲಿರುವ ಅಲ್ವಾರ್ ಪೊಲೀಸ್ ಠಾಣೆಯ ಗೋಡೆಗೆ ಆರು ಮಂದಿಯ ತಂಡ ಆಗಮಿಸಿ ಹಲವಾರು ಸುತ್ತು ಗುಂಡು ಹಾರಿಸಿತ್ತು. ಬಳಿಕ ಲಾಕಪ್ ನಲ್ಲಿದ್ದ ವಿಕ್ರಮ ಗುಜ್ಜಾರ್ ಎಂಬ ಕ್ರಿಮಿನಲ್ ಜತೆ ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.

ಬಹುಶಃ ಎಕೆ 47 ರೈಫಲ್ಸ್ ಉಪಯೋಗಿಸಿ ಠಾಣೆಯ ಗೋಡೆಗೆ ಗುಂಡು ಹಾರಿಸಿ ಗೋಡೆಯನ್ನು ಕೊರೆದು ಕ್ರಿಮಿನಲ್ ಗುಜ್ಜಾರ್ ನನ್ನು ಕರೆದೊಯ್ಯಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಗ್ಯಾಂಗ್ ಗುಜ್ಜಾರ್ ಜತೆ ಬಿಳಿಯ ಹುಂಡೈ ಐ20 ಕಾರಿನಲ್ಲಿ ಪರಾರಿಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಜ್ಜಾರ್ ತಲೆಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. 28 ವರ್ಷದ ಗುಜ್ಜಾರ್ ಹರ್ಯಾಣದ ಮಹೇಂದ್ರಗಢ್ ನಿವಾಸಿಯಾಗಿದ್ದು, ಈತನ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಗುರುವಾರ ರಾಜಸ್ಥಾನ್ ಪೊಲೀಸರು ವಿಕ್ರಮ್ ಗುಜ್ಜಾರ್ ನನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next