Advertisement

ಹರ್ಷ ಹತ್ಯೆ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ? ವಿಡಿಯೋ ವೈರಲ್

04:48 PM Jul 04, 2022 | Team Udayavani |

ಶಿವಮೊಗ್ಗ : ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ದಾಳಿ ವೇಳೆ ಆರೋಪಿಗಳ ಬಳಿಯಲ್ಲಿ ಮೊಬೈಲ್​ ಹಾಗೂ ಇತರ ಉಪಕರಣಗಳು ಪತ್ತೆಯಾಗಿವೆ.

Advertisement

ಪರಪ್ಪನ ಅಗ್ರಹಾರ ಜೈಲ್ ನ ಆಯ್ದ ಸೆಲ್​ಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಆರೋಪಿಗಳ ಸೆಲ್​ಗಳ ಮೇಲೂ ದಾಳಿ ಮಾಡಿದಾಗ, ಆರೋಪಿಗಳಿಗೆ ವಿಶೇಷ ಆರೈಕೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಹಿಂದೂ ಹರ್ಷನ ಕೊಲೆ ಆರೋಪಿಗಳಾದ ಖಾಸೀಫ್​ ಮತ್ತು ​ ಗ್ಯಾಂಗ್​ ಪರಪ್ಪನ ಅಗ್ರಹಾರದಲ್ಲಿರುವ ಸೆಲ್​ ಗಳಲ್ಲಿ ಸೆಲ್ಫಿ ಶೂಟ್ ಮಾಡಿಸಿಕೊಂಡಿದ್ದು, ಜೈಲಿನಲ್ಲಿದ್ದೇ ಆರೋಪಿಗಳಿಂದ ಹಲವರಿಗೆ ವಿಡಿಯೋ ಕಾಲ್​ ಮಾಡಲಾಗಿದೆ.

ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿರುವ ವಿಡಿಯೋಗಳು, ಬೇರೆಯದ್ದೆ ರೀತಿಯಲ್ಲಿ ಎಡಿಟ್ ಮಾಡಿ ಲಾಂಗು , ಮಚ್ಚಿನ ಹಾಡುಗಳೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಡಲಾಗಿದೆ.

ಮನೆಯವರಿಗೂ ಮೊಬೈಲ್ ತಮ್ಮ ಸೆಲ್​ಗೆ ತರಿಸಿಕೊಂಡ ಆರೋಪಿಗಳು ವಿಡಿಯೋ ಕಾಲ್​ ಮಾಡಿದ್ದಾರೆ. ವಿಡಿಯೋ ಕಾಲ್​ ಮಾಡಿದ್ದು, ಯೋಗಕ್ಷೇಮ ವಿಚಾರಿಸಲು ಈ ರೀತಿ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವುದು ಕಾರಾಗೃಹ ವ್ಯವಸ್ಥೆಯ ಬಗ್ಗೆ ಬಲವಾದ ಪ್ರಶ್ನೆಗಳು ಮೂಡಿವೆ.

Advertisement

ಈ ಸಂಬಂಧ ಪರಪ್ಪನ ಅಗ್ರಹಾರದ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಪ್ಪು ಮಾಡಿದ ಜೈಲು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next