Advertisement

ಹುಣಸೂರು : ಹೆಸರಿಗೆ ಸಹಕಾರ ಸಮ್ಮಿಲನದಲ್ಲಿ ಮೆಳೈಸಿದ ರಾಜಕೀಯ

09:38 PM Jul 30, 2022 | Team Udayavani |

ಹುಣಸೂರು : ನಗರಸಭೆ ಮೈದಾನದಲ್ಲಿ ನಡೆದ ಸಹಕಾರ ಸಮ್ಮಿಲನ ರಾಜಕೀಯ ತಿರುವು ಪಡೆದುಕೊಂಡಿದೆ.

Advertisement

ಸಮಾರಂಭದಲ್ಲಿ ಮಾತನಾಡಿದ ಶಾಸಕ ಹೆಚ್.ಪಿ.ಮಂಜುನಾಥ್ ತಮ್ಮ ಮೂರು ಬಾರಿಯ ಗೆಲುವಿನಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಮತ್ತವರ ಪುತ್ರ ಹರೀಶ್‌ಗೌಡರ ಸಹಕಾರವಿತ್ತೆಂದು ಸ್ಮರಿಸಿ, ಮುಂದೆಯೂ ಅವರ ಸಹಕಾರ, ಆರ್ಶಿವಾದ ಇರಲೆಂದು ಮನವಿ ಮಾಡಿದರೆ, ಇತ್ತ ಜಿ.ಟಿ.ದೇವೇಗೌಡರು ಹುಣಸೂರೇ ನನಗೂ ಹಾಗೂ ಜಿ.ಡಿ.ಹರೀಶ್‌ಗೌಡ, ಪತ್ನಿ ಲಲಿತರ ರಾಜಕೀಯವಾಗಿ ನೆಲೆ ನೀಡಿದ್ದನ್ನು ಸ್ಮರಿಸಿ, ಅದಕ್ಕಾಗಿ ನನ್ನ ಪ್ರೀತಿಯ ತವರೂರೆಂದು ಹೇಳಿ, ಮುಂದಿನ ಚುನಾವಣೆಗೆ ಸ್ಪರ್ಧೆಯ ಸುಳಿವು ನೀಡಿದರು.

ಶಾಸಕರಾದ ಮಂಜುನಾಥ್, ವಿಶ್ವನಾಥರನ್ನು ಹಿಂದೆ ಬೆಂಬಲಿಸಿದ್ದನ್ನು ಸ್ಮರಿಸಿದರು. ಜಿ.ಡಿ.ಹರೀಶ್‌ಗೌಡ ನಾನು ಈ ಮಟ್ಟಕ್ಕೆ ಬೆಳೆಯಲು ಹುಣಸೂರು ಕ್ಷೇತ್ರವೇ ಕಾರಣವಾಗಿದ್ದು, ಇಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆಂದು ಹೇಳಿ, ಹುಣಸೂರು ಕ್ಷೇತ್ರಕ್ಕೆ ತಮ್ಮ ರಾಜಕೀಯ ಪ್ರವೇಶವನ್ನು ಪರೋಕ್ಷವಾಗಿ ಸೂಚಿಸಿದರು.

ಇದನ್ನೂ ಓದಿ : ಈಗ ಲೋಕಸಭೆ ಚುನಾವಣೆ ನಡೆದರೆ ಮೋದಿಗೆ ಭರ್ಜರಿ ಗೆಲುವು

Tags :
Advertisement

Udayavani is now on Telegram. Click here to join our channel and stay updated with the latest news.

Next