Advertisement

ಮರಳು ಅಕ್ರಮ ತಡೆಯಲು ರಸ್ತೆಗಳಲ್ಲಿ ಟ್ರೆಂಚ್‌

11:25 AM Jun 06, 2020 | Team Udayavani |

ಹರಿಹರ: ತಾಲೂಕಿನ ವಿವಿಧೆಡೆ ತುಂಗಭದ್ರಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ತಡೆಯಲು ಅಧಿಕಾರಿಗಳು ಅಲ್ಲಲ್ಲಿ ನದಿ ಸಂಪರ್ಕಿಸುವ ಗ್ರಾಮೀಣ ರಸ್ತೆಗಳನ್ನು ಬಗೆದು ಕಂದಕ ತೋಡುತ್ತಿದ್ದಾರೆ.

Advertisement

ಮರಳು ಅಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ನದಿಯಿಂದ ಮರಳು ತುಂಬಿಕೊಂಡು ಬರುವ ಟ್ರ್ಯಾಕ್ಟರ್‌, ಲಾರಿ ಮುಂತಾದ ವಾಹನಗಳಿಗೆ ಆಸ್ಪದವಾಗದಂತೆ ನದಿ ಸಂಪರ್ಕಿಸುವ ರಸ್ತೆಗಳನ್ನು ಅಡ್ಡಲಾಗಿ 5 ಅಗಲ, 5 ಅಳದ ಕಂದಕ ನಿರ್ಮಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಮಾಡುವವರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವುದು, ಮರಳುಗಾರಿಕೆ ನಡೆಸದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಬದಲು ಶೀತವಾದರೆ ಮೂಗನ್ನೆ ಕೊಯ್ಯುವಂತೆ ಅಧಿಕಾರಿಗಳು ರಸ್ತೆ ಅಗೆಯುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next