Advertisement

Congress ಸರಕಾರದಲ್ಲಿ ಕಿರುಕುಳ ಆದರೆ ಹೇಳುತ್ತೇನೆ : ಸಚಿವ ಸತೀಶ್ ಜಾರಕಿಹೊಳಿ

05:30 PM Oct 25, 2023 | Team Udayavani |

ಬೆಳಗಾವಿ: ನನಗೆ ಸರಕಾರದಲ್ಲಿ ಯಾವುದೇ ತೊಂದರೆ ಇಲ್ಲ.ನಮಗೆ ಇಲ್ಲಿಯರೆಗೆ ಕಿರುಕುಳ ಆಗಿಲ್ಲ, ಆದರೆ ಹೇಳುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಸಹೋದರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ”ಸರಕಾರದಲ್ಲಿ ಸತೀಶಗೆ ಹಿಂಸೆ ಆಗ್ತಿದೆ” ಎಂಬ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಮ್ಮದೇನೂ ಬಂಡಾಯ ಇಲ್ಲ ಎಂದು ಪತಿಕ್ರಿಯೆ ನೀಡಿದ್ದಾರೆ.

ಹೆಣ್ಣಿನ ಹಸ್ತಕ್ಷೇಪದಿಂದ ಸರ್ಕಾರಕ್ಕೆ ಕಂಟಕ ಎಂಬ ಮೈಲಾರ ಕಾರ್ಣಿಕ ವಿಚಾರಕ್ಕೆ ಸಂಬಂಧಿಸಿ ನಸುನಗುತ್ತ ಪ್ರತಿಕ್ರಿಯಿಸಿ,”ಅದು ಹಳೆಯದಿರಬೇಕು, ನೋಡಿ ಹೊಸದಲ್ಲ. ನಾನು ಅಂಥವನ್ನೆಲ್ಲ ನಂಬಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next