Advertisement

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

02:26 AM May 04, 2024 | Team Udayavani |

ಕೋಲ್ಕತಾ: ಮ್ಮ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಬೆನ್ನಲ್ಲೇ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಶ್ಚಿಮ ಬಂಗಾಲ ರಾಜ್ಯಪಾಲ ಸಿ.ವಿ. ಆನಂದ ಬೋಸ್‌, “ಇದು ವ್ಯವಸ್ಥಿತ ಪಿತೂರಿ’ ಎಂದು ಆಪಾದಿಸಿದ್ದಾರೆ.

Advertisement

“ನಿಮ್ಮ ಪೂರ್ವಯೋಜಿತ ದಾಳಿಗಾಗಿ ಎದುರು ನೋಡುತ್ತಿದ್ದೇನೆ. ದಯವಿಟ್ಟು ಗುಂಡು ಹಾರಿಸಿ’ ಎಂದು ತಮ್ಮ ವಿರುದ್ಧದ ದೂರಿನ ಹಿಂದಿರು ವವರನ್ನು ಗುರಿಯಾಗಿಸಿ ಹೇಳಿದ್ದಾರೆ.ಇದು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ದುರುದ್ದೇಶದ ಕೊನೆಯ ಅಸ್ತ್ರವಾಗಿದೆ. ಇವುಗಳಿಗೆಲ್ಲ ಸಿದ್ಧನಾಗಿಯೇ ನಾನು ಪಶ್ಚಿಮ ಬಂಗಾಲಕ್ಕೆ ಬಂದಿದ್ದೇನೆ. ಇಂಥ ರಾಜಕೀಯ ಪ್ರೇರಿತ ದಾಳಿಗಳಿಗೆಲ್ಲ ನಾನು ಹೆದರುವುದಿಲ್ಲ. ಸತ್ಯ ಗೆಲ್ಲಲಿದೆ. ರಾಜಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ಸಿಬಂದಿ ಈ ರೀತಿಯ ರಾಜಕೀಯ ಪ್ರೇರಿತ ದುಷ್ಟ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next