Advertisement

ಕಾರಿನ ಒಳಗಡೆ ಎಳೆದು ಆರ್‌ಟಿಐ ಕಾರ್ಯಕರ್ತನಿಂದ ಲೈಂಗಿಕ ದೌರ್ಜನ್ಯ

11:27 AM Jan 15, 2022 | Team Udayavani |

ಬೆಂಗಳೂರು: ಆರ್‌ಟಿಐ ಕಾರ್ಯಕರ್ತನೊಬ್ಬ ಮಹಿ ಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ 44 ವರ್ಷದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ನಂದಿನಿ ಲೇಔಟ್‌ ಠಾಣೆ ಪೊಲೀಸರು ತಮ್ಮಣ್ಣ ಗೌಡ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದಡಿ ಎಫ್ಐಆರ್‌ ದಾಖಲಾಗಿದೆ.

Advertisement

ನಂದಿನಿ ಲೇಔಟ್‌ನ ಜೈಮಾರುತಿನಗರ ನಿವಾಸಿಯಾರುವ ಸಂತ್ರಸ್ತೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿ ದ್ದಾರೆ. ನಿತ್ಯ ರಾತ್ರಿ 8.30ರಿಂದ ಮುಂಜಾನೆ 8.30ರವರೆಗೆ ಕೆಲಸ ಮಾಡುತ್ತಾರೆ. ಈ ಮಧ್ಯೆ 2021ರ ಅ.10ರಂದು ಬೆಳಗ್ಗೆ 9.30ರ ಸುಮಾರಿಗೆ ಗೊರಗುಂಟೆ ಪಾಳ್ಯದ ಕಣ್ವ ಆಸ್ಪತ್ರೆ ಮುಂಭಾಗ ಹೋಗುವಾಗ ಆರೋಪಿ, ತಾನೊಬ್ಬ ಆರ್‌ಟಿಐ ಕಾರ್ಯಕರ್ತ ಎಂದು ಮಹಿಳೆ ಯನ್ನು ಮಾತನಾಡಿಸಿದ್ದು, ಆಕೆಯ ಮೊಬೈಲ್‌ ತೆಗೆದುಕೊಂಡು ತನ್ನ ನಂಬರ್‌ಗೆ ಡಯಲ್‌ ಮಾಡಿಕೊಂಡಿದ್ದಾನೆ. ಬಳಿಕ ನಿತ್ಯ ಕರೆ ಮಾಡಿ ಆಕೆ ಜತೆ ಅನುಚಿತವಾಗಿ ಮಾತನಾಡುತ್ತಿದ್ದ. ಸಂತ್ರಸ್ತೆ ನಿರಾಕರಿಸಿದರೂ ಪದೇ ಪದೆ ಕರೆ ಮಾಡಿ ತೊಂದರೆ ಕೊಡುತ್ತಿ ದ್ದ. ಈ ಮಧ್ಯೆ ನಡೆದುಕೊಂಡು ಹೋಗುವಾಗ ಸಂತ್ರಸ್ತೆಯನ್ನು ತನ್ನ ಕಾರಿನ ಒಳಗಡೆ ಎಳೆದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಅದರಿಂದ ಆಕ್ರೋಶಗೊಂಡ ಸಂತ್ರಸ್ತೆ ತನ್ನ ಪತಿ ಹಾಗೂ ಸಂಬಂಧಿಯೊಬ್ಬರಿಗೆ ಈ ವಿಚಾರ ತಿಳಿಸಿ, ನ.21ರಂದು ಕಮಲನಗರದಲ್ಲಿರುವ ಸಂಬಂಧಿ ಬೈರಪ್ಪ ಎಂಬವರ ಮನೆಗೆ ಆರೋಪಿಯನ್ನು ಕರೆಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಈ ರೀತಿ ಮಾಡದಂತೆ ಸಂತ್ರಸ್ತೆ ಮತ್ತು ಆಕೆಯ ಸಂಬಂಧಿಕರ ಬಳಿ ಮನವಿ ಮಾಡಿದ್ದಾನೆ. ಹೀಗಾಗಿ ದೂರು ನೀಡಿರಲಿಲ್ಲ. ಆದರೂ ಆರೋಪಿ ತನ್ನನ್ನು ಹಿಂಬಾಲಿಸಲು ವ್ಯಕ್ತಿ ಯೊಬ್ಬನನ್ನು ಬಿಟ್ಟಿದ್ದ. ಜತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆ ಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next