Advertisement

ಪಂಪಾ ಸರೋವರದಲ್ಲಿ ಹನುಮ ಮಾಲಾಧಾರಿ ನಾಪತ್ತೆ

10:53 AM Dec 16, 2018 | |

ಗಂಗಾವತಿ: ತಾಲೂಕಿನ ಪಂಪಾ ಸರೋವರದಲ್ಲಿ ಮುಳುಗಿ ಹನುಮ ಮಾಲಾಧಾರಿ ಯುವಕ ನಾಪತ್ತೆಯಾದ ಘಟನೆ ಶನಿವಾರ ಸಂಭವಿಸಿದೆ. ಕೊಪ್ಪಳದ ಹಮಾಲಿ ಕ್ವಾರ್ಟ್‌ರ್ಸ್‌ ನಿವಾಸಿ ಮಣಿಕಂಠ ಶಂಕ್ರಯ್ಯಸ್ವಾಮಿ (17) ನಾಪತ್ತೆಯಾದ ಯುವಕ.

Advertisement

ಹನುಮಮಾಲೆ ಧಾರಣೆ ಮಾಡಿದ್ದರಿಂದ ಶನಿವಾರ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ದರ್ಶನ ಮಾಡಿಕೊಂಡು ಪಂಪಾ ಸರೋವರಕ್ಕೆ ತೆರಳಿ, ಈಜುವ ಸಂದರ್ಭದಲ್ಲೇ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಠಾಣೆ ಪಿಎಸ್‌ಐ ಪ್ರಕಾಶ ಮಾಳೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next