Advertisement

ಎ..ಅವ್ನ ಒದ್ದ್‌ ಓಡ್ಸ್‌ರೋ.. ಆಂಜನೇಯ ಕಿಡಿ ಕಾರಿದ್ದೇಕೆ ? 

03:51 PM Sep 01, 2017 | |

ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ವೇಳೆ ಕಾರ್ಯಕರ್ತನೊಬ್ಬನ ಮೊಬೈಲ್‌ ರಿಂಗ್‌ ಆಗಿದ್ದಕ್ಕೆ ಸಚಿವ ಎಚ್‌. ಆಂಜನೇಯ ಅವರು ಕಿಡಿ ಕಾರಿದ ಘಟನೆ ಶುಕ್ರವಾರ ನಡೆದಿದೆ. 

Advertisement

ಸುದ್ದಿಗಾರರು ಸುತ್ತುವರಿದು ಇಂದಿನ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನಿಸುತ್ತಿದ್ದರು. ಈ ವೇಳೆ ಹಿಂಬದಿಯಲ್ಲಿ ನಿಂತಿದ್ದ ಬೆಂಬಲಿಗನೊಬ್ಬನ ಮೊಬೈಲ್‌ ಏರು ಧ್ವನಿಯಲ್ಲಿ ರಿಂಗಣಿಸಿದೆ. ಕೆಂಡಾಮಂಡಲವಾದ ಆಂಜನೇಯ ಅವರು ಏಯ್‌..ಅವನನ್ನು ಒದ್ದ್‌ ಓಡ್ಸ್‌ರೋ .. ಎಂದು ಕೆಂಗಣ್ಣು ಬಿಟ್ಟು ದುರುಗುಟ್ಟಿ ನೋಡಿದರು. 

ವ್ಯಕ್ತಿ ಸ್ಥಳದಿಂದ ತೆರಳಿದ ಮೇಲೆ ಸುದ್ದಿಗಾರರೊಂದಿಗೆ ಮಾತು ಮುಂದುವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next